Sunday, September 8, 2024

ಸಿಪಿ‌ಐ‌ಎಂ ಹಿರಿಯ ಮುಖಂಡ ಕೆ.ಗೋವಿಂದ ಶೆಟ್ಟಿಗಾರ್ ನಿಧನ


ಕುಂದಾಪುರ, ಜೂ.3: ಸಿಪಿ‌ಐ(ಎಂ)ಪಕ್ಷದ ಹಿರಿಯ ಮುಖಂಡರು, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಮಾಜಿ ಅಧ್ಯಕ್ಷರು, ಕೋಟೇಶ್ವರ ಗ್ರಾಮಪಂಚಾಯತ್ ಮಾಜಿ ಸದಸ್ಯರಾಗಿದ್ದ ಕೆ.ಗೋವಿಂದ ಶೆಟ್ಟಿಗಾರ್ (88 ವ) ಜೂ.3ರಂದು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು.

ಕುಂದಾಪರದ ಪ್ರಭಾಕರ ಟೈಲ್ಸ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಆರಂಭಿಸಿದ ಅವರು ಅನಂತರ ಕೋಟೇಶ್ವರದ ತನ್ನ ಊರಿನಲ್ಲಿ ಸೈಕಲ್ ಅಂಗಡಿಯನ್ನು ತೆರೆದು ಸ್ವಯಂ ಉದ್ಯೋಗದಲ್ಲಿ ನಿರತರಾಗಿದ್ದರು. 1970 ರಲ್ಲಿ ಸಿಪಿ‌ಐ(ಎಂ) ಪಕ್ಷದಲ್ಲಿ ರಾಜಕೀಯ ಜೀವನ ಆರಂಭಿಸಿದ ಅವರು ಭೂಸುಧಾರಣೆ ಕಾನೂನು ಜಾರಿಗಾಗಿ, ಗೇಣಿದಾರ ರೈತರ ಭೂಮಿ ಸಕ್ರಮಕ್ಕಾಗಿ ನಡೆದ ಹೋರಾಟದಲ್ಲಿ ಸಕ್ರೀಯರಾಗಿದ್ದರು. ಕೋಟೇಶ್ವರ ಗ್ರಾಮಪಂಚಾಯತ್‌ಗೆ ಎರಡು ಅವಧಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಜನಾನುರಾಗಿಯಾಗಿದ್ದರು.


ಮೃತರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಸಿಪಿ‌ಐ(ಎಂ) ಕುಂದಾಪುರ ವಲಯ ಸಮಿತಿ ತೀವ್ರ ಸಂತಾಪ ಸೂಚಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!