Sunday, September 8, 2024

‘ಉಳ್ಳೂರಿನ ಆಶುಕವಯಿತ್ರಿ ಮೂಕಾಂಬಿಕಾ ಐತಾಳ್’ ಆಂಗ್ಲಭಾಷಾ ಕೃತಿ ಬಿಡುಗಡೆ

ಕೋಟ: ‘ಅನಕ್ಷರಸ್ಥೆಯಾಗಿದ್ದರು ಅತ್ಯಂತ ಪ್ರತಿಭಾವಂತ ಕವಯಿತ್ರಿಯಾಗಿದ್ದ ಉಳ್ಳೂರಿನ ಮೂಕಾಂಬಿಕಾ ಐತಾಳ್ ಅವರಿಗೆ ಸಿಗಬೇಕಾದ ಪ್ರಚಾರ ಸಾಕಷ್ಟು ಸಿಗಲಿಲ್ಲ. ಈಗ ಅವರ ಬಗ್ಗೆ ಎಲ್ಲ ವಿವರಗಳನ್ನೊಳಗೊಂಡ ಒಂದು ಇಂಗ್ಲಿಷ್ ಕೃತಿ ’ದಿ ಸಾಂಗ್ ಬರ್ಡ್ ಆಫ್ ಉಳ್ಳೂರ್’ ಡೆಲ್ಲಿಯ ಇಂಟರ್ ನ್ಯಾಷನಲ್ ಪಬ್ಲಿಷರ್ಸ್ ಆದ ಆಥರ್ಸ್ ಪ್ರೆಸ್ ಅವರಿಂದ ಪ್ರಕಟಗೊಂಡಿದೆ. ಇದರ ಮೂಲಕ ಮೂಕಾಂಬಿಕಾ ಅವರಿಗೆ ಜಾಗತಿಕ ಮಟ್ಟದ ಪ್ರಚಾರ ದೊರಕುವಂತಾಗಲಿ’ ಎಂದು ಉದ್ಯಮಿ ಹಾಗೂ ಕೋಟದ ಕಾರಂತ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಅನಂದ ಸಿ.ಕುಂದರ್ ಹೇಳಿದರು.

ಅವರು ಡಾ|ಪಾರ್ವತಿ ಜಿ.ಐತಾಳ್ ಬರೆದ ಉಳ್ಳೂರಿನ ಆಶುಕವಯಿತ್ರಿ ಮೂಕಾಂಬಿಕಾ ಐತಾಳ್ (ಮೂಕಜ್ಜಿಯೆಂದು ಖ್ಯಾತರಾದ) ಬದುಕು-ಬರೆಹಗಳ ಕುರಿತಾದ ಆಂಗ್ಲಭಾಷಾ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಡಾ.ಅರುಣಕುಮಾರ್ ಶೆಟ್ಟಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರಂತ ಪ್ರತಿಷ್ಠಾನದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು. ಅಶ್ವಿನಿ ಐತಾಳ್ ಸಂದರ್ಭೋಚಿತ ಮಾತುಗಳನ್ನಾಡಿದರು. ಶೈಲಾ ಎಸ್ ಪೂಜಾರಿ ವಂದಿಸಿದರು. ಕಾರ್ಯದರ್ಶಿ ನರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!