spot_img
Thursday, March 5, 2026
spot_img

ಪಾರ್ವತಿ ಐತಾಳರ ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಕೃತಿ ಅನಾವರಣ

ಜನಪ್ರತಿನಿಧಿ (ಕುಂದಾಪುರ) : ‘ ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿ ದೇಶ-ದೇಶಗಳ ನಡುವೆ ಮತ್ತು ಭಾಷೆ-ಭಾಷೆಗಳ ನಡುವಿನ ಸಂಪರ್ಕ ಹೆಚ್ಚಾಗಿದೆ. ಆದ್ದರಿಂದ  ಅನುವಾದದ ಮಹತ್ವವು ಹೆಚ್ಚಾಗಿದೆ ಎಂದು ಲೇಖಕಿ ವಿಮಲಾ ನಾವಡ ಹೇಳಿದರು.

ಅವರು ಎ.ಎಸ್.ಎನ್.ಹೆಬ್ಬಾರ್ ಅವರ ಮನೆ ‘ನುಡಿ’ ಯಲ್ಲಿ ನಡೆದ ಡಾ. ಪಾರ್ವತಿ ಜಿ. ಐತಾಳ್‌ ಅವರ ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಕೃತಿಯನ್ನು  ಬಿಡುಗಡೆಗೊಳಿಸಿ ಮಾತನಾಡಿದರು.

ಇವತ್ತು ಮಲೆಯಾಳ ಏನೂ ಗೊತ್ತಿಲ್ಲದೆ ಮಲೆಯಾಳದ ಮಹತ್ವದ ಸಾಹಿತ್ಯ ಕೃತಿಗಳು ನಮಗೆ ಸವಿಯಲು ಸಿಗುತ್ತಿವೆ ಎಂದಾದರೆ ಅದಕ್ಕೆ ಕಾರಣ ನಮ್ಮ ಅನುವಾದಕರೇ ಆಗಿದ್ದಾರೆ. ಮಲೆಯಾಳದ ಮೂಲಕ ಪಾರ್ವತಿ ಅವರು ಒಂದು ಸ್ವಾರಸ್ಯಪೂರ್ಣ ಕೃತಿಯನ್ನು ಕನ್ನಡಕ್ಕೆ ತಂದಿರುವುದು ಶ್ಲಾಘನೀಯ ಎಂದು ಅವರು ಹೇಳೀದರು.

ಎ.ಎಸ್.ಎನ್.ಹೆಬ್ಬಾರ್ ಶುಭಾಶಂಸನೆ ಗೈದರು. ಕೃತಿಯ ಲೇಖಕಿ ಪಾರ್ವತಿ ಜಿ. ಐತಾಳ್ ಉಪಸ್ಥಿತರಿದ್ದರು. ಸುಧಾ ಹೆಬ್ಬಾರ್ ಅತಿಥಿಗಳನ್ನು ಸ್ವಾಗತಿಸಿದರು.  ಕನ್ನಡ-ಮಲೆಯಾಳ ಅನುವಾದಕಿ ಜೆಸ್ಸಿ ಎಲಿಜಬೆತ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!