spot_img
Wednesday, March 4, 2026
spot_img

ಏ.26ರಂದು ಕೋಟ ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗದ ದಶಮಾನೋತ್ಸವ

ಕೋಟ: ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ (ರಿ.) ಕೋಟ ಇದರ ದಶಮಾನೋತ್ಸವ ದಶಮ ಡಿಂಡಿಮ ಸೌರಭ ಸಂಭ್ರಮ ಏಪ್ರಿಲ್ 26 ರಂದು ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಲಿದೆ ಎಂದು ಕಲಾರಂಗದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ ತಿಳಿಸಿದರು.

ಅವರು ಸಾಲಿಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದಶಮಾನೋತ್ಸವದ ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದ್ದು ‘ಯಕ್ಷ ಸೌರಭ ಪ್ರಶಸ್ತಿ’ಯನ್ನು ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿಯವರಿಗೆ ಹಾಗೂ ದಶಮಾನೋತ್ಸವ ‘ಯಕ್ಷ ಸುರಭಿ ಪ್ರಶಸ್ತಿ’ಯನ್ನು ಗೀತಾನಂದ ಫೌಂಡೇಶನ್ ಮಣೂರು ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಅವರಿಗೆ ಪ್ರದಾನ ಮಾಡಲಾಗುವುದು. ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಿಗೆ ಗುರುವಂದನೆ ಸಲ್ಲಿಸಲಾಗುವುದು. ಹಿರಿಯ ಹವ್ಯಾಸ ಕಲಾವಿದರಾದ ಗೋಪಾಲಕೃಷ್ಣ ಪೈ ಗಿಳಿಯಾರು, ಶಂಕರ ದೇವಾಡಿಗ ಕಾರ್ಕಡ ಇವರನ್ನು ಸನ್ಮಾನಿಸಲಾಗುವುದು ಎಂದರು.

ದಶಮ ಗೌರವ ಯಕ್ಷಸಿರಿ ಸಮ್ಮಾನಕ್ಕೆ ಸಾಲಿಗ್ರಾಮ ಮಕ್ಕಳ ಮೇಳ, ಅಜಪುರ ಕರ್ನಾಟಕ ಸಂಘ ರಿ. ಬ್ರಹ್ಮಾವರ, ಶ್ರೀ ಲಕ್ಷ್ಮಿ ಜನಾರ್ದನ ಯಕ್ಷಗಾನ ಕಲಾ ಮಂಡಳಿ ಅಂಬಲಪಾಡಿ, ಶ್ರೀ ಲಕ್ಷ್ಮಿ ಗಜಾನನ ಯಕ್ಷಗಾನ ಕಲಾಸಂಘ (ರಿ.) ದೊಂಡೆರಂಗಡಿ, ಗಜಾನನ ಯಕ್ಷಗಾನ ಕಲಾ ಸಂಘ (ರಿ.) ತೊಟ್ಟಂ, ಯಶಸ್ವಿ ಕಲಾವೃಂದ ಕೊಮೆ (ರಿ.) ತೆಕ್ಕಟ್ಟೆ, ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ.) ವಡ್ದರ್ಸೆ, ಯಕ್ಷ ನುಡಿ ಸಿರಿ ಸಿದ್ದಾಪುರ, ಶ್ರೀ ಮಹಾಗಣಪತಿ ಯಕ್ಷPಲಾ ಸಮಿತಿ ಮೊರ್ಟು, ಸುವರ್ಣ ಯಕ್ಷ ಬಳಗ ಕೋಟ, ಯಕ್ಷಕೇದಿಗೆ ಶ್ರೀ ಮಹಾಲಿಂಗೇಶ್ವರ ಕಲಾ ರಂಗ(ರಿ.) ಯಡಾಡಿ ಮತ್ಯಾಡಿ ಈ ಎಲ್ಲಾ ಸಂಘಗಳನ್ನು ಗೌರವಿಸಲಾಗುವುದು.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಾಡೋಜ ಜಿ. ಶಂಕರ್ ಉದ್ಘಾಟಿಸಲಿದ್ದು ಸಭಾಧ್ಯಕ್ಷತೆಯನ್ನು ರಾಘವೇಂದ್ರ ಕರ್ಕೇರ್ ಕೋಡಿ ವಹಿಸಲಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಯಕ್ಷ ಸೌರಭ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಯಕ್ಷ ಸುರಭಿ ಪ್ರಶಸ್ತಿಯನ್ನು ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಪ್ರಧಾನ ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ. ಕೆ. ಎಸ್. ಕಾರಂತ್, ಮಯ್ಯ ಯಕ್ಷಶ್ರೀ ಪ್ರತಿಷ್ಠಾನ ಅನಲಾಡಿಮಠ ಐರೋಡಿ ಇದರ ಸಂಸ್ಥಾಪಕ ಋಷಿಕುಮಾರ ಮಯ್ಯ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಚಲನಚಿತ್ರ ನಿರ್ದೇಶಕ ರವಿ ಬಸ್ರೂರು, ವಿದ್ಯುತ್ ಗುತ್ತಿಗೆದಾರ ಕೆ. ಆರ್.ನಾಯಕ್, ಉದ್ಯಮಿ ಎಂ ಸಿ ಚಂದ್ರಶೇಖರ ಪೂಜಾರಿ ಸಾಸ್ತಾನ ಪಾಂಡೇಶ್ವರ, ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ನ್ಯಾಯವಾದಿ ಮಂಜುನಾಥ ಗಿಳಿಯಾರು, ಡಾ.ಕೃಷ್ಣ ಕಾಂಚನ್, ಶಂಭು ಪೂಜಾರಿ ಕೋಡಿ ಕನ್ಯಾನ ಭೋಜ ಪೂಜಾರಿ ಚಿತ್ರಪಾಡಿ ಭಾಗವಹಿಸಲಿದ್ದಾರೆ ಎಂದರು.

ಸಂಜೆ 4ರಿಂದ ತೆಂಕು ಬಡಗಿನ ಪ್ರಸಿದ್ದ ಕಲಾವಿದರಿ0ದ ಗಾನ ಸೌರಭ, ಸಭಾ ಕಾರ್ಯಕ್ರಮದ ನಂತರ ತೆಂಕು ಬಡಗಿನ ಹವ್ಯಾಸಿ ಕಲಾವಿದರಿಂದ ದ್ರೌಪದೀ ಪ್ರತಾಪ, ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸ್ಥಾಪಕಾಧ್ಯಕ್ಷ ಹರೀಶ್ ಭಂಡಾರಿ ಗಿಳಿಯಾರು, ಉಪಾಧ್ಯಕ್ಷ ಕಾರ್ತಿಕ್ ಆಚಾರ್ಯ ಕೋಟ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀನಾಥ ಉರಾಳ ಚಿತ್ರಪಾಡಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!