spot_img
Sunday, February 15, 2026
spot_img

ಪ್ರಕಾಶ್ ರೇಡಿಯೋ ಮಾಲಿಕ ಎನ್.ಪ್ರಕಾಶ್ ರಾವ್ ನಿಧನ

ಕುಂದಾಪುರ: ಕುಂದಾಪುರದ ಪ್ರಕಾಶ್ ರೇಡಿಯೋ ಮಾಲಿಕರಾಗಿದ್ದ ಎನ್.ಪ್ರಕಾಶ್ ರಾವ್ (65 ವ) ಅಲ್ಪಕಾಲದ ಅಸೌಖ್ಯದಿಂದ ಮಾ.16ರಂದು ಸ್ವಗೃಹದಲ್ಲಿ ನಿಧನರಾದರು.

ಕುಂದಾಪುರ ಪೇಟೆಯಲ್ಲಿ ಎಂಬತ್ತರ ದಶಕದಲ್ಲಿ ಪ್ರಕಾಶ್ ರೇಡಿಯೋ ಎಂಬ ಮಳಿಗೆ ಸ್ಥಾಪಿಸಿದ್ದ ಇವರು ಅಂದಿನ ರೇಡಿಯೋ ಟೇಪ್ ರೆಕಾರ್ಡರ್ ಗಳ ರಿಪೇರಿ ಮಾಡುವಲ್ಲಿ ಪ್ರಸಿದ್ಧರಾಗಿದ್ದರು. ಹೆಸರಾಂತ ಹಿರಿಯ ವಕೀಲರಾದ ನೇರಂಬಳ್ಳಿ ಪರಮಯ್ಯರ ಪುತ್ರರಾಗಿದ್ದ ಇವರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಸಾಂಪ್ರದಾಯಿಕ ಹುಲಿ ವೇಷ ಕುಣಿತ ಪ್ರದರ್ಶನ, ನವರಾತ್ರಿ ಉತ್ಸವ, ಕುಂದೇಶ್ವರ ದೀಪೋತ್ಸವ ಆಚರಣೆಗಳಲ್ಲಿ ಸಕ್ರಿಯರಾಗಿದ್ದ ಇವರ ನಿಧನಕ್ಕೆ ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಸಮಾಜ ಸೇವಕ ಡೇವಿಡ್ ಸೀಕ್ವೇರಾ ಹಾಗೂ ಕುಂದಾಪುರ ತಾಲ್ಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಸಂತಾಪ ಸೂಚಿಸಿದೆ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!