Sunday, September 8, 2024

ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ ಸಾಲ್ಗದ್ದೆ ಶಶಿಧರ್ ಶೆಟ್ಟಿ

ಬೈಂದೂರು: ಪ್ರತಿಷ್ಠಿತ ಬಂಟರ ಯಾನೆ ನಾಡವರ ಸಂಘ ಬೈಂದೂರು ಇದರ ನೂತನ ಅಧ್ಯಕ್ಷರಾಗಿ ಸಾಲ್ಗದ್ದೆ ಶಶಿಧರ್ ಶೆಟ್ಟಿಯವರು ಇತ್ತೀಚೆಗೆ ನಡೆದ ಬಂಟರ ಮಹಾಸಭೆಯಲ್ಲಿ ಅಧಿಕಾರ ಸ್ವೀಕರಿಸಿದರು.

ನಿವೃತ್ತ ಶಿಕ್ಷಕರಾಗಿರುವ ಶಶಿಧರ್ ಶೆಟ್ಟಿಯವರು ಕ್ರಿಯಾಶೀಲತೆಯ ಬಹುಮುಖ ವ್ಯಕ್ತಿತ್ವದ ನಾಯಕತ್ವ ಗುಣಗಳನ್ನು ಹೊಂದಿರು ಸಂಘಟನ ಚತುರ. ಸಾಲ್ಗದ್ದೆ ಮನೆತನದ ಶಶಿಧರ ಶೆಟ್ಟಿಯವರು ನಿವೃತ್ತ ಶಿಕ್ಷಕ ದಿ.ನಾಗಯ್ಯ ಶೆಟ್ಟಿಯವರ ಪುತ್ರ, ಹಾಗೇ ಪ್ರತೀ ವರ್ಷ ಶಿಕ್ಷಕರಿಗೆ ಕೊಡ ಮಾಡುವ ನಾಗಯ್ಯ ಶೆಟ್ಟಿ ಪ್ರತಿಷ್ಠಾನದ ಶಿಕ್ಷಕರ ಪ್ರಶಸ್ತಿಯಲ್ಲಿ ಶಶಿಧರ್ ಶೆಟ್ಟಿಯವರ ಮುತುವರ್ಜಿ ಶ್ಲಾಘನೀಯವಾದುದು.

ಬೈಂದೂರು ಬಂಟರ ಸಂಘದ ಮಹಾಸಭೆಯ ಸಭಾಧ್ಯಕ್ಷತೆಯನ್ನು ವಸಂತ ಹೆಗ್ಡೆ ವಹಿಸಿದ್ದರು. ಕಾರ್ಯದರ್ಶಿ ಜಗದೀಶ್ ಶೆಟ್ಟಿ ಸ್ವಾಗತಿಸಿ ವಂದಿಸಿದರು. ವೇದಿಕೆಯಲ್ಲಿ ಹಿರಿಯ ಪದಾಧಿಕಾರಿಗಳು, ಚುನಾವಣಾಧಿಕಾರಿ ಮಂಜುನಾಥ್ ಶೆಟ್ಟಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!