Sunday, September 8, 2024

ಮೇ 28ರಂದು ಕುಂದಾಪುರ ತಾಲೂಕು ಸವಿತಾ ಸಮಾಜದ ವಾರ್ಷಿಕ ಮಹಾಸಭೆ

ಕುಂದಾಪುರ, ಮೇ 27: ಕುಂದಾಪುರ ತಾಲೂಕು ಸವಿತಾ ಸಮಾಜದ ವಾರ್ಷಿಕ ಮಹಾಸಭೆ ಮೇ 28ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕುಂದಾಪುರದ ಆರ್.ಎನ್ ಶೆಟ್ಟಿ ಕಲ್ಯಾಣ ಭವನ, ಬಿ.ಎ.ಎನ್ ಕಾಂಪ್ಲೆಕ್ಸ್ ಇಲ್ಲಿ ನಡೆಯಲಿದೆ.

ಕುಂದಾಪುರ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಸುಭಾಸ್ ಭಂಡಾರಿ ಗುಜ್ಜಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ ಭಂಡಾರಿ ಹೆಮ್ಮಾಡಿ ಉದ್ಘಾಟನೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸವಿತಾ ಸಮಾಜ ಉಡುಪಿ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಂಬಲಪಾಡಿ ಉಡುಪಿ ಇದರ ಅಧ್ಯಕ್ಷ ನವೀನಚಂದ್ರ ಭಂಡಾರಿ ಮಣಿಪಾಲ, ಕುಂದಾಪುರ ತಾಲೂಕು ಸವಿತಾ ಸಮಾಜದ ಉಪಾಧ್ಯಕ್ಷ ಮಧುಕರ ಭಂಡಾರಿ ಕೋಟೇಶ್ವರ, ಕೋಶಾಧಿಕಾರಿ ಮಂಜು ಭಂಡಾರಿ ಬಸ್ರೂರು, ಪ್ರಧಾನ ಕಾರ್ಯದರ್ಶಿ ಸುಜಯ ಸುವರ್ಣ ವಕ್ವಾಡಿ, ಕುಂದಾಪುರ ತಾಲೂಕು ಭಂಡಾರಿ ಸಂಘದ ಅಧ್ಯಕ್ಷ ಸುಭಾಸ ಭಂಡಾರಿ ಹಂಗಳೂರು, ಪರಿಯಾಳ ಸಮಾಜ ಸುಧಾರಕ ಸಂಘ ಕುಂದಾಪುರ ಇದರ ಅಧ್ಯಕ್ಷ ಮಂಜುನಾಥ ಸಾಲಿಯಾನ್ ತ್ರಾಸಿ ಭಾಗವಹಿಸಲಿದ್ದಾರೆ.

ಸವಿತಾ ಸಮಾಜ ಗಂಗೊಳ್ಳಿ ವಲಯ ಅಧ್ಯಕ್ಷ ಶೇಖರ ಸುವರ್ಣ ಬಂಟ್ವಾಡಿ, ಬೈಂದೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಪ್ರಶಾಂತ ಭಂಡಾರಿ ಬೈಂದೂರು, ವಂಡ್ಸೆ ವಲಯ ಸವಿತಾ ಸಮಾಜದ ಅಧ್ಯಕ್ಷ ಗಣೇಶ ಭಂಡಾರಿ ವಂಡ್ಸೆ, ಹಾಲಾಡಿ ಸವಿತಾ ಸಮಾಜದ ಅಧ್ಯಕ್ಷ ಸುಧಾಕರ ಭಂಡಾರಿ ಹಾಲಾಡಿ, ಬಸ್ರೂರು ಸವಿತಾ ಸಮಾಜದ ಘಟಕದ ಅಧ್ಯಕ್ಷ ಮಹೇಶ ಭಂಡಾರಿ ಬಸ್ರೂರು, ಹಾಲಾಡಿ ಘಟಕದ ಅಧ್ಯಕ್ಷ ಪ್ರಸಾದ ಭಂಡಾರಿ ಶಂಕರನಾರಾಯಣ, ಸಿದ್ಧಾಪುರ ಘಟಕ ಸವಿತಾ ಸಮಾಜದ ಅಧ್ಯಕ್ಷ ಪ್ರಕಾಶ ಭಂಡಾರಿ ಸಿದ್ಧಾಪುರ, ತಲ್ಲೂರು ಸವಿತಾ ಸಮಾಜ ಘಟಕದ ಅಧ್ಯಕ್ಷ ಗಣೇಶ ಭಂಡಾರಿ ತಲ್ಲೂರು, ಸವಿತಾ ಸಮಾಜ ಕೋಟೇಶ್ವರ ಘಟಕದ ಅಧ್ಯಕ್ಷ ನಾರಾಯಣ ಬಂಗೇರ ಬೀಜಾಡಿ ಗೌರವ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!