spot_img
Friday, March 27, 2026
spot_img

ಸುದ್ದಿ ವಾಹಿನಿಗಳನ್ನು ನೋಡಬೇಡಿ, ಧಾರಾವಾಹಿಗಳನ್ನು ನೋಡಿ ಆನಂದಿಸಿ : ಮಹಿಳೆಯರಿಗೆ ಸಂತೋಷ್‌ ಲಾಡ್‌ ಮನವಿ

ಜನಪ್ರತಿನಿಧಿ (ಧಾರವಾಡ) : ಸುದ್ದಿ ವಾಹಿನಿಗಳನ್ನು ನೋಡಬೇಡಿ, ಟಿವಿ ಧಾರಾವಾಹಿಗಳನ್ನು ನೋಡಿ ಆನಂದಿಸಿ ಎಂದು ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮಹಿಳೆಯರಿಗೆ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರವು ಟಿವಿ ಚಾನೆಲ್‌ಗಳಲ್ಲಿ ತನ್ನ ಸಾಧನೆಗಳನ್ನು ಎತ್ತಿ ತೋರಿಸುವ ಮೆಗಾ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದೆ ಮತ್ತು ಇದು ಲೋಕಸಭಾ ಚುನಾವಣೆ ಮುಗಿಯುವವರೆಗೆ ಮುಂದುವರಿಯುತ್ತದೆ ಎಂದು ಸಚಿವರು ಆರೋಪಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಕೇಂದ್ರವು ಪ್ರಚಾರಕ್ಕಾಗಿ 6,000 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದೆ. ಬಿಜೆಪಿಗೆ ತನ್ನ ಸಾಧನೆಗಳಲ್ಲಿ ನಂಬಿಕೆಯಿದ್ದರೆ, ಮೆಗಾ ಪ್ರಚಾರವಿಲ್ಲದೆ ಚುನಾವಣೆಗೆ ಹೋಗುವ ವಿಶ್ವಾಸ ಇರಬೇಕು. ಚುನಾವಣೆಯ ಸಮಯದಲ್ಲಿ ಬಿಜೆಪಿ ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಹಾಗೂ ಇತರ ಸೂಕ್ಷ್ಮ ವಿಷಯಗಳ ಬಗ್ಗೆ ಎತ್ತಿ ಪ್ರಚಾರ ಮಾಡುತ್ತದೆ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವರು ಟೀಕೆ ಮಾಡಿದ್ದಾರೆ.

ನಾವು ಪ್ರಚಾರದ ವಿರುದ್ಧ ಅಲ್ಲ. ಆದರೆ ಅದು ಅಭಿವೃದ್ಧಿ ವಿಷಯಗಳ ಮೇಲಿರಲಿ. ಭರವಸೆಯ ಉದ್ಯೋಗಗಳು ಎಲ್ಲಿವೆ? ಕಪ್ಪುಹಣ ವಾಪಸ್ ತರುವುದು ಮತ್ತು ಬೆಲೆ ಏರಿಕೆ ಕಥೆ ಏನು ಎಂದು ಲಾಡ್ ಕಟುವಾಗಿ ಪ್ರಶ್ನಿಸಿದ್ದಾರೆ.

ಈ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿ. ವರ್ಣರಂಜಿತ ಜಾಹೀರಾತುಗಳನ್ನು ನೀಡುವ ಮೂಲಕ ಬಿಜೆಪಿ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದೆ ಎಂದು ಲಾಡ್ ಹೇಳಿದರು. ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮೋಹನ್ ರಾಮದುರ್ಗ, ಸಚಿವರು ಮತ್ತು ಇತರ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ಭಯದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!