Sunday, September 8, 2024

ಮೋದಿ ಅವರೇ ತಮ್ಮ 18 ಗಂಟೆಯ ಕೆಲಸ ಫೋಟೋಶೂಟ್ ಗೆ ಮಾತ್ರ ಮೀಸಲಾಗಿದೆಯೇ? : ಕಾಂಗ್ರೆಸ್‌ ಪ್ರಶ್ನೆ

ಜನಪ್ರತಿನಿಧಿ (ಬೆಂಗಳೂರು) : ಬಿಜೆಪಿ ರೈತರಿಗೆ ಕೊಡುವ ಉಡುಗೊರೆ – ಗುಂಡೇಟು. ಈ ಹಿಂದೆ ರೈತರು ಪ್ರತಿಭಟನೆ ನಡೆಸಿದ್ದಾಗ ನೀಡಿದ್ದ ಭರವಸೆಗಳನ್ನು ಕಾರ್ಯಗತಗೊಳಿಸದೆ ವಂಚಿಸಿದ ಒಕ್ಕೂಟ ಸರ್ಕಾರ ತಾನು ನುಡಿದಂತೆ ನಡೆಯುವುದಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ ಎಂದು ರಾಜ್ಯ ಕಾಂಗ್ರೆಸ್‌ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ತನ್ನ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ಟೀಕಿಸಿದ ಕಾಂಗ್ರೆಸ್‌, ಮಾನ್ಯ ನರೇಂದ್ರ ಮೋದಿ ಅವರೇ, ತಮ್ಮ 18 ಗಂಟೆಯ ಕೆಲಸ ಫೋಟೋಶೂಟ್ ಗೆ ಮಾತ್ರ ಮೀಸಲಾಗಿದೆಯೇ? ರೈತರೊಂದಿಗೆ ಮಾತನಾಡಲು ಸಮಯವಿಲ್ಲವೇ? ಎಂದು ಪ್ರಶ್ನಿಸುವುದರ ಮೂಲಕ ಅವರ ಅವರು ವಿರುದ್ಧ ಹರಿಹಾಯ್ದಿದೆ.

ಇನ್ನು, ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ  ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹರಿಯಾಣದ ಹಿಸಾರ್‌ ಜಿಲ್ಲೆಯ ಖೇಡಿ ಚೋಪ್ಟಾ ಗ್ರಾಮದಿಂದ ಶುಕ್ರವಾರದ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದ ರೈತರ ಮೇಲೆ ಪೊಲೀಸರುಯ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದರು. ʼದೆಹಲಿ ಚಲೋʼ ಪ್ರತಿಭಟನಾ ಮೆರವಣಿಗೆ ಸಲುವಾಘಿ ಖನೌರಿ ಗಡಿಯಲ್ಲಿರುವ ರೈತರಿಗೆ ಬೆಂಬಲ ಸೂಚಿಸಿ, ಅಲ್ಲಿಗೆ ಹೊರಟಿದ್ದ ರೈತರನ್ನು ಪೋಲಿಸರು ತಡೆದಿದ್ದರು.

ಇದಕ್ಕೆ ಪ್ರತಿಕಾರವಾಗಿ ರೈತರು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆದರು. ಮತ್ತೆ ಪೊಲೀಸರು ಹಾಗೂ ರೈತರ ನಡುವೆ ಮತ್ತೆ ಘರ್ಷಣೆ ನಡೆದಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!