Sunday, September 8, 2024

ಜಾತ್ಯಾತೀತ ಎಂದರೆ ಆಡಳಿತದಲ್ಲಿ ಧರ್ಮ ನಿರಪೇಕ್ಷತೆ ಎಂಬ ಪಾಠವನ್ನು ಪ್ರಿಯಾಂಕ್‌ ಖರ್ಗೆಗೆ ಮುದದಿಂದ ಕಲಿಸಬೇಕಿದೆ : ಬಿಜೆಪಿ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಢೋಂಗಿ ಜಾತ್ಯಾತೀತವಾದದ ಮುಖವಾಡ ಹಾಕಿಕೊಂಡಿರುವ ಪ್ರಿಯಾಂಕ್‌ ಖರ್ಗೆ ಅವರು ಕಾನೂನನ್ನೂ ಧರ್ಮದ ಆಧಾರದಲ್ಲಿ ನೋಡುತ್ತೇವೆ ಎನ್ನುತ್ತಿರುವುದು ಸರ್ವ ಜನಾಂಗದ ಶಾಂತಿಯ ತೋಟದ ಪಾಲಿನ ದುರಂತ ಎಂದು ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

ʼಕೇಸರಿ ಶಾಲು ಹಾಕಿಕೊಂಡು ಅಕ್ರಮ ಚಟುವಟಿಕೆ ನಡೆಸಿದರೆ ಸುಮ್ಮನಿರಬೇಕೆ ? ಕಾನೂನು ಬಾಹೀರ  ಚಟುವಟಿಕೆ ಯಾರೇ ಮಾಡಲಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆʼ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ನೀಡಿರುವ ಹೇಳಿಕೆಗೆ ರಾಜ್ಯ ಬಿಜೆಪಿ ಹರಿಹಾಯ್ದಿದೆ.

ನಾಡು, ನುಡಿ, ಸಂಸ್ಕೃತಿಯನ್ನು ಬಣ್ಣದ ಕನ್ನಡಕದಿಂದ ನೋಡುವ ರಾಜ್ಯ ಕಾಂಗ್ರೆಸ್ ಸಾರ್ವಜನಿಕವಾಗಿ ತಲ್ವಾರ್ ಹಿಡಿದು ಮೆರೆಯುವವರಿಗೆ ರಕ್ಷಣೆಯನ್ನೂ ಕೊಟ್ಟು ಪೋಷಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹೇಳಿದೆ.

ಜಾತ್ಯಾತೀತ ಎಂದರೆ ಓಲೈಕೆಯಲ್ಲ, ಆಡಳಿತದಲ್ಲಿ ಧರ್ಮ ನಿರಪೇಕ್ಷತೆ ಎಂಬ ಪಾಠವನ್ನು ಪ್ರಿಯಾಂಕ್‌ ಖರ್ಗೆಯವರಿಗೆ ಮುದದಿಂದ ಕಲಿಸಬೇಕಿದೆ ಎಂದು ಹೇಳಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!