spot_img
Friday, April 17, 2026
spot_img

ಫೆಬ್ರವರಿಯಲ್ಲಿ ದೇವರುಕೊಂಡ, ರಶ್ಮಿಕಾ ಮಂದಣ್ಣ ಜೋಡಿ ನಿಶ್ಚಿತಾರ್ಥ !

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಆದಾಗ್ಯೂ, ಇಬ್ಬರು ನಟರು ತಮ್ಮ ಪ್ರೇಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಆದರೇ,  ಇತ್ತೀಚಿಗೆ  ನ್ಯೂಸ್ 18 ತೆಲುಗು, ವಿಜಯ್‌ ಹಾಗೂ ರಶ್ಮಿಕಾ ಜೋಡಿ ಫೆಬ್ರವರಿ ಎರಡನೇ ವಾರದಲ್ಲಿ ತಮ್ಮ ನಿಶ್ಚಿತಾರ್ಥದ ಬಗ್ಗೆ ಮುಕ್ತವಾಗಿ ಘೋಷಿಸಲು ಯೋಜಿಸುತ್ತಿದ್ದಾರೆ. ಆದರೆ, ಈ ಬಗ್ಗೆ ರಶ್ಮಿಕಾ ಮಂದಣ್ಣ ಅಥವಾ ವಿಜಯ್ ದೇವರಕೊಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಮಾಡಿದೆ.

‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಎಂಬ ಎರಡು ಸಿನೆಮಾಗಳಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರೂ ಸ್ಥಿರ ಸಂಬಂಧದಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿಯಾಗಿದೆ.

ಕಳೆದ ಕೆಲವು ದಿನಗಳಿಂದ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥದ ಬಗ್ಗೆ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಫೆಬ್ರವರಿ ಎರಡನೇ ವಾರದಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ನ್ಯೂಸ್ 18 ವರದಿ ಹೇಳಿದೆ. ಅವರ ನಿಶ್ಚಿತಾರ್ಥದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸಿನಿ ಇಂಡಸ್ಟ್ರಿ ಹಾಗೂ ದೇವರುಕೊಂಡ ಹಾಗೂ ರಶ್ಮಿಕಾ ಆಪ್ತ ಬಳಗದ ಮೂಲದಿಂದ ಬಂದ ಮಾಹಿತಿಯನ್ನು ವರದಿ ಮಾಡಿದೆ.

ಇತ್ತೀಚೆಗೆ ರಶ್ಮಿಕಾ ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ್ದರು. ಇಬ್ಬರೂ ಒಟ್ಟಿಗೆ ಡೇಟಿಂಗ್‌ಗೆ ಹೋಗಿರುವುದು ಸಹ ಕಂಡುಬಂದಿದೆ.

ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ಜೋಡಿಯ ಸಿನೆಮಾ ‘ಅನಿಮಲ್’ ಬ್ಲಾಕ್ಬಸ್ಟರ್ ಹಿಟ್‌ ಕಂಡಿತ್ತು , ಇದು ವಿಶ್ವದಾದ್ಯಂತ 800 ಕೋಟಿ ರೂ. ಗಳಿಸಿತ್ತು. ಪ್ರಸ್ತುತ ರಶ್ಮಿಕಾ ಅಲ್ಲು ಅರ್ಜುನ್ ಅವರ ‘ಪುಷ್ಪ: ದಿ ರೂಲ್’ ಚಿತ್ರೀಕರಣದಲ್ಲಿದ್ದಾರೆ. ‘ರೇನ್‌ಬೋ’, ‘ದಿ ಗರ್ಲ್‌ಫ್ರೆಂಡ್’ ಮತ್ತು ‘ಚಾವಾ’ ಸಿನೆಮಾಗಳು ರಶ್ಮಿಕಾ ಮುಂದಿನ ಪ್ರಾಜೆಕ್ಟ್‌ಗಳು.

ವಿಜಯ್ ದೇವರಕೊಂಡ ಪರಶುರಾಮ್ ಪೆಟ್ಲಾ ಅವರ ‘ಫ್ಯಾಮಿಲಿ ಸ್ಟಾರ್’ ಮತ್ತು ನಿರ್ದೇಶಕ ಗೌತಮ್ ತಿನ್ನನೂರಿ ಅವರ ‘ವಿಡಿ 12’ ನಲ್ಲಿ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿಯೊಂದಿಗೆ ರಶ್ಮಿಕಾ ಅವರ ನಿಶ್ಚಿತಾರ್ಥ ನಡೆದಿತ್ತು. ತದನಂತರ ರಶ್ಮಿಕಾ ತೆಲುಗು ಸಿನಿ ಇಂಡಸ್ಟ್ರಿಗೆ ಕಾಲಿಟ್ಟು ಬ್ಯುಸಿ ಆಗಿದ್ದರು. ʼಗೀತ ಗೋವಿಂದಂʼ ಸಿನೆಮಾದಲ್ಲಿ ದೇವರುಕೊಂಡ ಹಾಗೂ ರಶ್ಮಿಕಾ ಬೋಲ್ಡ್‌ ಆಗಿ ಕಿಸ್ಸಿಂಗ್‌ ಸೀನ್‌ ನಲ್ಲಿ ಕಾಣಿಸಿಕೊಂಡಿದ್ದೇ ರಕ್ಷಿತ್‌ ಹಾಗೂ ರಶ್ಮಿಕಾ ನಡುವಿನ ಪ್ರೇಮ ಸಂಬಂಧ ಮುರಿದು ಬೀಳುವುದಕ್ಕೆ ಮೂಲ ಕಾರಣ ಎಂದು ಬಿಂಬಿತವಾಗಿತ್ತು. ಆದಾಗ್ಯೂ, ರಶ್ಮಿಕಾ ರಕ್ಷಿತ್‌ ಸಿನೆಮಾಗಳಿಗೆ ಶುಭಕೋರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!