Sunday, September 8, 2024

ಯತ್ನಾಳ್ ಹೇಳಿದ ಆ “ರಾತ್ರಿ ರಹಸ್ಯ” ಯಾವುದು ಬಿ. ವೈ. ವಿಜಯೇಂದ್ರ ಅವರೇ? : ಕಾಂಗ್ರೆಸ್‌ ಪ್ರಶ್ನೆ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಯತ್ನಾಳ್ ಹೇಳಿದ ಆ “ರಾತ್ರಿ ರಹಸ್ಯ” ಯಾವುದು ಬಿ. ವೈ. ವಿಜಯೇಂದ್ರ ಅವರೇ? ರಾಜ್ಯವನ್ನು ದುಶ್ಚಟಗಳಿಗೆ ಬಲಿ ಕೊಡಲಾಗಿತ್ತೆ? ರಾಜ್ಯವನ್ನು “ರಾತ್ರಿ ವ್ಯವಹಾರ”ಗಳಿಂದ ಆಳಲಾಗುತ್ತಿತ್ತೇ? ಎಂದು ಕಾಂಗ್ರೆಸ್‌ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ ಅವರನ್ನು ಪ್ರಶ್ನೆ ಮಾಡಿದೆ.

ಇದುವರೆಗೂ ಚೆಕ್, RTGS, ಕ್ಯಾಶ್ ಬಗೆಯ ಲಂಚದ ಮಾದರಿ ಇದ್ದವು, ಈಗ ರಾತ್ರಿ ವ್ಯವಸ್ಥೆಯೂ ಲಂಚದ ಮತ್ತೊಂದು ಸ್ವರೂಪ ಹೊರಬಂದಿದೆ. ಇಂತಹ ಗಂಭೀರ ಸಂಗತಿ ಬಯಲಾದರೂ ಬಿಜೆಪಿ ರಾಜ್ಯಾಧ್ಯಕ್ಷರು ಮೌನ ಮುರಿಯದಿರುವುದೇಕೆ? ಎಂದೂ ಪ್ರಶ್ನೆ ಮಾಡಿದೆ.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾಧ್ಯಮಗಳ ವರದಿಗಾರರಿಗೆ ಪ್ರತಿಕ್ರಿಯಿಸುತ್ತಾ, ʼಯಡಿಯೂರಪ್ಪನವರಿಗೆ ರಾತ್ರಿ ವ್ಯವಸ್ಥೆ ಎಲ್ಲಾ ನಾನ್‌ ಮಾಡಿಲ್ಲʼ ಎಂದು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ಈ ಮೇಲಿನ ಪ್ರಶ್ನೆಗಳನ್ನು ಕೇಳಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!