Sunday, September 8, 2024

ಪಿಎಸ್‌ಐ, ಕೆಇಎ ನೇಮಕ ಪರೀಕ್ಷೆ : ಇಡೀ ಜಿಲ್ಲೆಗೆ ಕಳಂಕ ತಂದ ಕೀರ್ತಿ ಪ್ರಿಯಾಂಕ್ ಖರ್ಗೆಗೆ ಸಲ್ಲುತ್ತದೆ : ಬಿಜೆಪಿ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಪಿಎಸ್‌ಐ ಹಾಗೂ ಕೆಇಎ ನೇಮಕ ಪರೀಕ್ಷಾ ಅಕ್ರಮ ಕಲಬುರುಗಿ ಜಿಲ್ಲೆಗೆ ಕಳಂಕ ತಂದಿದ್ದು ಜಿಲ್ಲೆಯ ಅಭ್ಯರ್ಥಿಗಳು ಎಲ್ಲೇ ಪರೀಕ್ಷೆ ಬರೆದರೂ ಅವರ ಮೇಲೆ ಹದ್ದಿನ ಕಣ್ಣು ಇಡುವಂತಹ ವಾತಾವೃಣ ನಿರ್ಮಾಣವಾಗಿದೆ ಎಂಬ ಪತ್ರಿಕಾ ವರದಿಯೊಂದನ್ನು ಉಲ್ಲೇಖಿಸಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗುವುದಕ್ಕೆ ಕಲಬುರಗಿ ಜಿಲ್ಲೆ ಇಡೀ ದೇಶದಲ್ಲಿ ಹೆಸರು ಮಾಡುವಂತೆ ಮಾಡಿದ್ದು ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್‌ ಖರ್ಗೆ ಎಂದು ಜರೆದಿದೆ.  ಜಿಲ್ಲೆಯ ನಿಷ್ಠಾವಂತ ವಿದ್ಯಾರ್ಥಿಗಳು, ಉದ್ಯೋಗ ಆಕಾಂಕ್ಷಿಗಳು ಕಲಬುರಗಿಗೆ ಅಂಟಿದ ಕಳಂಕದಿಂದಾಗಿ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದೆ.

ರಾಜ್ಯದ ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ಅಥವಾ ನೇಮಕಾತಿ ಪರೀಕ್ಷೆಯ ಸಮಯದಲ್ಲಿ ಕಲಬುರಗಿ ಜಿಲ್ಲೆಯವರಾದರೆ, ಹಲವು ಸಮಸ್ಯೆ, ಸವಾಲುಗಳನ್ನು ಎದುರಿಸುವ ಪರಿಸ್ಥಿತಿಯನ್ನು ರಾಜ್ಯ ಕಾಂಗ್ರೆಸ್‌ ತಂದಿಟ್ಟಿದೆ. ಇಡೀ ಜಿಲ್ಲೆಗೆ ಕಳಂಕ ತಂದ ಕೀರ್ತಿ ಪ್ರಿಯಾಂಕ್ ಖರ್ಗೆಗೆ ಸಲ್ಲುತ್ತದೆ ಎಂದು ಹೇಳಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!