Sunday, September 8, 2024

ಮಣಿಕಂಠ ಅವರನ್ನು ಅಭಿನಂದಿಸಿದ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ

ಕುಂದಾಪುರ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಚಪ್ಪಲಿ ಅಂಗಡಿಗೆ ಸಾಲ ಪಡೆದು ಯಶಸ್ಸು ಕಂಡ ಕುಂದಾಪುರದ ಮಣಿಕಂಠ ಅವರಿಗೆ ಕೇಂದ್ರ ಸರಕಾರದಿಂದ ಮುಂದಿನ ವರ್ಷ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಮಣಿಕಂಠನವರ ಚಪ್ಪಲಿ ಅಂಗಡಿಗೆ ತೆರಳಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ಮಂಡಲದ ಕ್ಷೇತ್ರಾಧ್ಯಕ್ಷರಾದ ಶಂಕರ್ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ನಿಕಟಪೂರ್ವ ಅಧ್ಯಕ್ಷರಾದ ಕಾಡೂರು ಸುರೇಶ್ ಶೆಟ್ಟಿ, ಕಾರ್ಯದರ್ಶಿ ಸುರೇಂದ್ರ ಕಾಂಚನ್ ಸಂಗಮ್, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ಕಡ್ಗಿ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾದ ಸುಧೀರ್ ಕೆ.ಎಸ್., ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೌರಭಿ ಪೈ, ಕಾರ್ಯದರ್ಶಿ ರೋಹಿಣಿ ಪೈ, ಪುರಸಭಾ ಸದಸ್ಯರಾದ, ಮೋಹನ್ ದಾಸ್ ಶೆಣೈ, ಪ್ರಭಾಕರ.ವಿ, ಸಂದೀಪ್ ಖಾರ್ವಿ, ಶೇಖರ್ ಪೂಜಾರಿ, ರಾಘವೇಂದ್ರ ಖಾರ್ವಿ ಮದ್ದುಗುಡ್ಡೆ, ವನಿತಾ ಬಿಲ್ಲವ, ಶ್ವೇತ ಸಂತೋಷ್, ನಿಕಟಪೂರ್ವ ಸದಸ್ಯರಾದ ದಿವಾಕರ್ ಕಡ್ಗಿ, ರತ್ನಾಕರ ಶೇರಿಗಾರ್, ಪ್ರಕಾಶ್ ಖಾರ್ವಿ, ಪುಷ್ಪ ಶೇಟ್, ಶೇಖರ್ ಕೈಪಾಡಿ ಇನ್ನಿತರರು ಉಪಸಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!