Sunday, September 8, 2024

ಕರ್ನಾಟಕದಲ್ಲಿ ಸಂಪೂರ್ಣ ಕತ್ತಲು ಆವರಿಸುವುದು ʼಗ್ಯಾರಂಟಿʼ : ಕಾಂಗ್ರೆಸ್‌ ವಿರುದ್ಧ ಬಿಜೆಪಿ ಆಕ್ರೋಶ

ಜನಪ್ರತಿನಿಧಿ ವಾರ್ತೆ : ಬಿಜೆಪಿ ಸರ್ಕಾರ ಸಾಧಿಸಿದ್ದ ಪವರ್ ಸರ್‌ ಪ್ಲಸ್ ಸ್ಟೇಟ್ ಕರ್ನಾಟಕ ಘನತೆಯ ಜತೆಗೆ ರಾಜ್ಯದ ಎಲ್ಲಾ ಘನತೆಗಳನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರ ಹಿಡಿಯುತ್ತಿದ್ದಂತೆ ಅಳಿಸಿ ಹಾಕುತ್ತಿದೆ ಎಂದು ಬಿಜೆಪಿ ಕಿಡಿ ಕಾರಿದೆ.

ಸಾಮಾಜಿಕ ಜಾಲತಾಣ ʼಎಕ್ಸ್‌ʼನ ಅಧಿಕೃತ ಖಾತೆಯ ಮೂಲಕ ಕಾಂಗ್ರೆಸ್‌ ವಿರುದ್ಧ ಆಕ್ರೋಶ ಹೊರಹಾಕಿದೆ. ಸಿದ್ದರಾಮಯ್ಯ ಅವರ ಸರ್ಕಾರ ಈಗಾಗಲೇ ವಿದ್ಯುತ್ ಅಭಾವದಿಂದ ರಾಜ್ಯವನ್ನು ಕತ್ತಲೆಯಾಗಿಸಿ, ವಿದ್ಯುತ್ ಉತ್ಪಾದನೆಯನ್ನು ಮೊಟಕುಗೊಳಿಸಿ, ಇದೀಗ ಬೇರೆ ರಾಜ್ಯಗಳ ಮುಂದೆ ವಿದ್ಯುತ್‌ಗಾಗಿ ಭಿಕ್ಷೆ ಬೇಡಲು ಮುಂದಾಗಿದೆ ಎಂದು ಜರೆದಿದೆ.

ಬೇಸಿಗೆಯಲ್ಲಿ ರಾಜ್ಯದಲ್ಲಿ ಸಮರ್ಪಕವಾಗಿ ವಿದ್ಯುತ್‌ ಪೂರೈಕೆಗೆ ಕ್ರಮ ಕೈಗೊಳ್ಳಲಿದ್ದೇವೆ. ವಿದ್ಯುತ್‌ ಕೊರತೆಯಾದರೆ ನೆರೆ ರಾಜ್ಯಗಳಿಂದಲೂ ಪಡೆಯಲು ಪ್ರಯತ್ನ ನಡೆಸುತ್ತೇವೆ ಎಂದು ಇಂಧನ ಸಚಿವ ಕೆ. ಜಾರ್ಜ್‌ ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ರಾಜ್ಯ ಬಿಜೆಪಿ ಕಿಡಿ ಕಾರಿದ್ದು, ಹೊರ ರಾಜ್ಯಗಳು ವಿದ್ಯುತ್ ಸಾಲ ಕೊಡದೆ ಹೋದರೆ, ಕರ್ನಾಟಕದಲ್ಲಿ ಸಂಪೂರ್ಣ ಕತ್ತಲು ಆವರಿಸುವುದು ಗ್ಯಾರಂಟಿ ಎಂದು ಹೇಳಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!