Sunday, September 8, 2024

ಸೂರಾಲು ಮೇಳಕ್ಕೆ ‘ಆವರ್ಸೆ ಶ್ರೀ ಶಂಕರನಾರಾಯಣ ಕ್ಷೇತ್ರ ಮಹಾತ್ಮೆ’


ಕುಂದಾಪುರ: ಬಡಗುತಿಟ್ಟಿನಲ್ಲಿ ಯಕ್ಷ ಪ್ರಯಾಣಕ್ಕೆ ಹೊರಟಿರುವ ಸೂರಾಲು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮೇಳದಲ್ಲಿ ಈ ತಿರುಗಾಟದಲ್ಲಿ ಆವರ್ಸೆ ಶ್ರೀ ಶಂಕರನಾರಾಯಣ ಕ್ಷೇತ್ರ ಮಹಾತ್ಮೆ ಯಕ್ಷಗಾನವನ್ನು ಪ್ರಯೋಗಕ್ಕೆ ಅನುಮೋದಿಸಲಾಗಿದೆ.

ರಾಜ್ಯ ಸಂಪನ್ಮೂಲ ವ್ಯಕ್ತಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಪ್ರಸಂಗಕರ್ತ ಪಿ. ವಿ. ಆನಂದ್ ಸಾಲಿಗ್ರಾಮ ಅವರು ತಮ್ಮ 50ನೆಯ ಪ್ರಸಂಗವಾಗಿ ರಚನೆ ಮಾಡಲು ಇತ್ತೀಚೆಗೆ ಆವರ್ಸೆ ದೇವಸ್ಥಾನದಲ್ಲಿ ಮೊಕ್ತೇಸರ ಸುಧಾಕರ ಶೆಟ್ಟಿ ಅವರಿಂದ ವೀಳ್ಯ ಸ್ವೀಕರಿಸಿದರು.

ನವೆಂಬರ್ 27 ರಂದು ಅವರ್ಸೆ ದೇವಸ್ಥಾನದಲ್ಲಿ ಪ್ರಸಂಗ ಬಿಡುಗಡೆ ಮತ್ತು ಪ್ರದರ್ಶನ ನಡೆಯಲಿದೆ. ಮೇಳದ ಸಂಚಾಲಕರು ಮತ್ತು ಪ್ರಧಾನ ಭಾಗವತರಾದ ರವಿ ಕುಮಾರ್ ಸೂರಾಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!