Sunday, September 8, 2024

ಸ್ಟಾಲಿನ್‌ರವರ ಗುಲಾಮರ ರೀತಿಯ “ಕೈ” ಸರ್ಕಾರದ ನಡೆ ನಾಡದ್ರೋಹದ ಕೆಲಸ : ಬಿಜೆಪಿ

ಜನಪ್ರತಿನಿಧಿ ವಾರ್ತೆ : ಕರ್ನಾಟಕದಲ್ಲಿ ಕಾವೇರಿಗಾಗಿ ಕಲಹ ಜೋರಾಗಿದೆ.ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪ್ರತಿಭಟನೆ ಜೋರಾಗಿದೆ. ರಾಜ್ಯ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಮಂಡ್ಯ ಭಾಗಗಳಲ್ಲಿ ಪ್ರತಿಭಟನೆ ಕಾವು ತಾರಕಕ್ಕೆ ಏರಿದೆ.

ಈ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಭಯೋತ್ಪಾದಕರು, ಸಮಾಜಘಾತುಕ ಶಕ್ತಿಗಳು ಚಿಗುರಿಕೊಂಡಂತೆ, ತಮಿಳುನಾಡು ಸಹ ಕಾವೇರಿಗೆ ಕ್ಯಾತೆ ತೆಗೆಯುವುದು ಸಾಮಾನ್ಯವಾಗಿದೆ ಎಂದಿದೆ.

ತಮಿಳುನಾಡಿನ ಕ್ಯಾತೆಗೆ ತಕ್ಕ ಉತ್ತರ ನೀಡುವ ಬದಲು, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಕಾಂಗ್ರೆಸ್ ಸರ್ಕಾರ, ಬೇಕಾಬಿಟ್ಟಿಯಾಗಿ ಕಾವೇರಿ ನೀರು ಬಿಟ್ಟ ಕಾರಣ, ಕೆ.ಆರ್.ಎಸ್ ಸಂಪೂರ್ಣ ಬರಿದಾಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಸೆಪ್ಟೆಂಬರ್ ತಿಂಗಳಲ್ಲಿಯೇ ಶುರುವಾಗಿದೆ. ರಾಜ್ಯದ ಹಿತವನ್ನು ಸಂಪೂರ್ಣ ಕಡೆಗಣಿಸಿ, ಸ್ಟಾಲಿನ್‌ರವರ ಗುಲಾಮರ ರೀತಿ “ಕೈ” ಸರ್ಕಾರ ನಡೆದುಕೊಳ್ಳುತ್ತಿರುವುದು, ನಿಜಕ್ಕೂ ನಾಡದ್ರೋಹದ ಕೆಲಸ ಎಂದು ಕಿಡಿ ಕಾರಿದೆ.

ಇನ್ನು, ನಿನ್ನೆ(ಸೆ.೨೧) ಈ ಕಾವೇರಿ ನದಿ ನೀರು ಹಂಚಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರತಿದಿನ ೫,೦೦೦ ಕ್ಯೂಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವು ಊರ್ಜಿತವಾಗಿದೆ ಎಂದು ಪ್ರಾಧಿಕಾರದ ನಿರ್ದೇಶನದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಮಾತ್ರವಲ್ಲದೆ, ಪ್ರಾಧಿಕಾರದ ನಿರ್ದೇಶನದಂತೆ ದಿನಕ್ಕೆ ೫೦೦೦ ಕ್ಯೂಸೆಕ್‌ ನೀರಿಗೆ ಬದಲಾಗಿ ೭,೨೦೦ ಕ್ಯೂಸೆಕ್‌ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕೆಂಬ ತಮಿಳುನಾಡು ಸರ್ಕಾರದ ಮನವಿಯನ್ನು ಕೋರ್ಟ್‌ ತಿರಸ್ಕರಿಸಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!