Sunday, September 8, 2024

ಸುವೇದಿತಾ ಅವರಿಗೆ ಜೀವ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ

ಬೆಂಗಳೂರು: ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುವೇದಿತಾ ಅವರು ಡಾ|| ಕೃಷ್ಣರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮ್ಯಾನೇಜ್ಮೆಂಟ್ ಆಫ್ ಪ್ಲಾಂಟ್ ವೈರಸ್ ಇನ್ ಕ್ಯಾಪ್ಸಿಕಮ್ ಎನ್ಯೂಮ್ ಎಲ್, ಥ್ರೂ ಇನ್ಡ್ಯೂಡ್ಸ್ ಸಿಸ್ಟಮ್ಯಾಟಿಕ್ ಆಕ್ವೈರ್ಡ್ ರೆಸಿಸ್ಟೆನ್ಸ್ ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಜೈನ್ ಯೂನಿವರ್ಸಿಟಿಯು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಸುವೇದಿತಾರವರು ಕೊಡಗಿನ ಕುಶಾಲನಗರದ ಫಾತಿಮಾ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಭಾರತಮಾತ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ, ಬಿ‌ಎಸ್ಸಿ (ಬಿಟಿಬಿ‌ಎಂ)ಯನ್ನು ಮುಗಿಸಿದ್ದಾರೆ. ಅದೇ ಕಾಲೇಜಿನಲ್ಲಿ ಸತತವಾಗಿ ಎರಡು ವಷ ಡಾ.ವಿ. ಸುಬ್ರಮಣ್ಯನ್ ಬಯೋಕೆಮಿಸ್ಟ್ರಿ ಅವಾರ್ಡನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಂತರ ಮಾನಸ ಗಂಗೋತ್ರಿಯಲ್ಲಿ ತಮ್ಮ ಎಂ.ಎಸ್ಸಿ. ಪದವಿಯನ್ನು ಮೆರಿಟ್ ಸೀಟ್‌ನಲ್ಲಿ ಮುಗಿಸಿದರು.
ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿ, ಅತ್ಯುತ್ತಮ ಮಂಡನೆಗಾಗಿ ಬೆಸ್ಟ್ ಪ್ರಸೆಂಟೇಷನ್ ಅವಾರ್ಡ್, ಒರಿಸ್ಸಾ ಹಾರ್ಟಿಕಲ್ಚರ್ ಸೊಸೈಟಿಯಿಂದ ಯಂಗ್ ರಿಸರ್ಚರ್ ಅವಾರ್ಡ್ ಪಡೆದಿರುತ್ತಾರೆ.

ಸುವೇದಿತಾರವರು ಗಾಯಕಿ ಮತ್ತು ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಇವರು ಕುಶಾಲನಗರದ ಉದ್ಯಮಿ ಸುಭಾಷ್ ಹಾಗೂ ಶಿಕ್ಷಕಿಯಾಗಿದ್ದ ವೇದಾಸುಭಾಷ್ ದಂಪತಿಗಳ ಪ್ರಥಮ ಪುತ್ರಿ. ಕುಂದಾಪುರ ಕೋಣಿಯ ಪ್ರಕಾಶ್ ಐತಾಳ ಹಾಗೂ ಸರಸ್ವತಿ ಐತಾಳ್ ದಂಪತಿಗಳ ಸುಪುತ್ರ ಅರ್ಜುನ್ ಐತಾಳ್ ಅವರ ಪತ್ನಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!