Sunday, September 8, 2024

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಭಜನ್ ಸಂಕೀರ್ತನೆ

ಕುಂದಾಪುರ: ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ಸರಣಿ ಕಾರ್ಯಕ್ರಮದಡಿ ಸತತ 85ನೇ ಕಾರ್ಯಕ್ರಮ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಶ್ರೀಮತಿ ದೇವಕಿ ಪ್ರಭು ತಲ್ಲೂರು ಮತ್ತು ವಾಸುದೇವ ಮಹಿಳಾ ಭಜನಾ ಮಂಡಳಿಯ ಸದಸ್ಯರು ನಡೆಸಿಕೊಟ್ಟ ಶ್ರೀ ವಿಷ್ಣು ಸಹಸ್ರನಾಮದೊಂದಿಗೆ ಪ್ರಾರಂಭವಾಯಿತು.

ಶ್ರೀಮತಿ ಶೈಲಜಾ ಭಟ್ ಉಪ್ರಳ್ಳಿ ಪ್ರಾರ್ಥಿಸಿದರು. ಅಗಸ್ತೇಶ್ವರ ದೇವಸ್ಥಾನ, ಕಿರಿಮಂಜೇಶ್ವರ ಇದರ ಮೊಕ್ತೇಸರರಾದ ಪ್ರಕಾಶ್ ಐತಾಳ್‌ರವರು ಅಧ್ಯಕ್ಷತೆ ವಹಿಸಿದ್ದರು. ಗೊಂಬೆಯಾಟದ ಹಿರಿಯ ಸೂತ್ರಧಾರಿ ವೆಂಕಟರಮಣ ಬಿಡುವಾಳ್, ಪದ್ಮನಾಭ ಹೆಬ್ಬಾರ್, ನಾಗೂರು, ಮಂಜುನಾಥ್ ಭಟ್, ರಮೇಶ್ ಭಟ್ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ರವರು ಉಪಸ್ಥಿತರಿದ್ದರು. ಅಕಾಡೆಮಿಯ ವತಿಯಿಂದ ಪದ್ಮನಾಭ ಹೆಬ್ಬಾರ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಪದ್ಮನಾಭ ಹೆಬ್ಬಾರ್, ನಾಗೂರು ಮತ್ತುತಂಡದವರು ಸುಶ್ರಾವ್ಯವಾಗಿ ಭಜನ್ ಸಂಕೀರ್ತನೆ ನಡೆಸಿಕೊಟ್ಟರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!