Sunday, September 8, 2024

ತ್ರಾಸಿ ಮಹಾಬಲೇಶ್ವರ ಐತಾಳ್ ನಿಧನ


ಕುಂದಾಪುರ: ತ್ರಾಸಿಯ ಆಟೋ ರಿಕ್ಷಾ ಚಾಲಕ, ಗುಜ್ಜಾಡಿ ಗ್ರಾಮದ ಹೋಲಿಕ್ರಾಸ್ ಸಮೀಪದ ಭಾರತ್ ನಗರ ನಿವಾಸಿ ಮಹಾಬಲೇಶ್ವರ ಐತಾಳ್ ಯಾನೆ ಮಾಣಿ (52) ಅಲ್ಪಕಾಲದ ಅಸೌಖ್ಯದಿಂದ ಉಡುಪಿಯ ಆಸ್ಪತ್ರೆಯಲ್ಲಿ ಗುರುವಾರ ನಿಧನ ಹೊಂದಿದರು.

ತ್ರಾಸಿ ಪರಿಸರದಲ್ಲಿ ಕಳೆದ ಸುಮಾರು 30 ವರ್ಷಗಳಿಂದ ಆಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಇವರು ತ್ರಾಸಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಕಳೆದ ಹಲವಾರು ವರ್ಷಗಳಿಂದ ತ್ರಾಸಿ-ಗುಜ್ಜಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುತ್ತಿದ್ದ ಇವರು ಪರಿಸರದಲ್ಲಿ ಮಾಣಿ ಎಂದೇ ಜನಾನುರಾಗಿದ್ದರು. ಮೃತರು ತಂದೆ, ತಾಯಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!