Sunday, September 8, 2024

ನವಶಕ್ತಿ ಮಹಿಳಾ ವೇದಿಕೆ ವತಿಯಿಂದ ಕನಕದಾಸ ಜಯಂತಿ  ಆಚರಣೆ

ಕೊಲ್ಲೂರು: ನವಶಕ್ತಿ ಮಹಿಳಾ ವೇದಿಕೆ ರಿ, ಕೊಲ್ಲೂರು ವತಿಯಿಂದ 535ನೇ ದಾಸ ಶ್ರೇಷ್ಠ ಸಂತ ಕನಕದಾಸ ಜಯಂತಿಯನ್ನು ನವಂಬರ್ 11 ಶುಕ್ರವಾರ ಆಚರಿಸಲಾಯಿತು. ಸಂಘದ ಸದಸ್ಯೆ ಶಾರದಾ ಆಚಾರ್ಯ ಕನಕದಾಸರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಮನುಷ್ಯನು ಜಾತಿ, ಕುಲವನ್ನು ಮೀರಿ ಬೆಳೆಯ ಬೇಕು ಎಂಬ ಸಂದೇಶ ನೀಡಿರುವ ಕನಕದಾಸರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಗ್ರೀಷ್ಮಾ ಗಿರಿಧರ ಭಿಡೆ , ಸದಸ್ಯರುಗಳಾದ ಸುಜಾತ ಆಚಾರ್ಯ , ಸುಗುಣ , ಜಯಲಕ್ಷ್ಮಿ ಕಾಶಿಹೊಳೆ, ಪೂಜಾ , ಗಿರಿಜಾ ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ರತ್ನ ಸ್ವಾಗತಿಸಿದರು, ಜೊತೆ ಕಾರ್ಯದರ್ಶಿ ಜಯಲಕ್ಷ್ಮಿ ಕೆ. ಎಚ್ ವಂದಿಸಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!