Sunday, September 8, 2024

ರೋಟರಿ ಸಮುದಾಯ ದಳ ಕೊರವಡಿ: ಗಾಂಧಿ, ಶಾಸ್ತ್ರೀ ಜಯಂತಿ ಆಚರಣೆ

ಕುಂದಾಪುರ: ರೋಟರಿ ಸಮುದಾಯ ದಳ ಕೊರವಡಿ ಇದರ ಭವನದಲ್ಲಿ ರಾಷ್ಟ್ರಪಿತ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹುಟ್ಟು ಹಬ್ಬದ ಶುಭ ಸಂದರ್ಭದಲ್ಲಿ ಪುಷ್ಪ ನಮನ ಕಾರ್ಯಕ್ರಮ ನಡೆಯಿತು.

ಇದೇ ವೇಳೆ ಇದೇ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಅವರ ನೇತೃತ್ವದಲ್ಲಿ ಸುಗಮ ಸಂಗೀತ ಶಿಬಿರ ಉದ್ಘಾಟನಾ ಸಮಾರಂಭ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಮಹಾಬಲ ಪುತ್ರನ್ ವಹಿಸಿದ್ದರು.

ಮೊಗವೀರ ಸಂಘಟನೆ ಕೋಟೇಶ್ವರ ಘಟಕಧ್ಯಕ್ಷ ಸುನಿಲ್ ಜಿ ನಾಯ್ಕ್, ಶಾಲಾಭಿವೃದ್ಧಿ ಸಮಿತಿ ಕೊರವಡಿ ಇದರ ವಾಸುದೇವ ಹತ್ವರ್, ಸಮುದಾಯ ದಳದ ಸದಸ್ಯರಾದ ರಾಮಚಂದ್ರ ಉಪಾಧ್ಯ, ಪುಟ್ಟುರಾಜ್ ಹೆಬ್ಬಾರ್, ಗಣೇಶ್ ನಾಯ್ಕ್, ಗಿರೀಶ್, ಅರುಣ್, ಸುನಿಲ್, ವೈಕುಂಠ, ಶ್ವೇತಾ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಪ್ರೊ. ಅಶ್ವಿನಿ ಪ್ರಾರ್ಥಿಸಿ, ರೋಟರಿ ಸಮುದಾಯ ದಳದ ನಿಕಟಪೂರ್ವ ಜಿಲ್ಲಾ ಪ್ರತಿನಿಧಿ ಶ್ರೀನಿಧಿ ಉಪಾಧ್ಯ ಸ್ವಾಗತಿಸಿ, ಕಾರ್ಯದರ್ಶಿ ಸುರೇಶ್ ವಿಠ್ಠಲವಾಡಿ ವಂದಿಸಿದರು, ರಮೇಶ್ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!