Sunday, September 8, 2024

ಕುಂದಾಪುರ ಎಡ್ವರ್ಡ್ ಮೆಮೇರಿಯಲ್ ಕ್ಲಬ್ ಪ್ರಾಯೋಜಕತ್ವದಲ್ಲಿ ಊಟ ವಿತರಣೆ


ಕುಂದಾಪುರ, ಜೂ.2: ಜೆಸಿ‌ಐ ಕುಂದಾಪುರ ಸಿಟಿ ಲಾಕ್ ಡೌನ್‌ನಿಂದ ಸಮಸ್ಯೆಗೆ ಸಿಲುಕಿದವರಿಗೆ ಊಟವನ್ನು ನೀಡುತ್ತಿದ್ದು ಕಳೆದ ೩೫ ದಿನಗಳಿಂದ ವಿವಿಧ ಸಂಘ ಸಂಸ್ಥೆಯ ಸಹಕಾರ ದಿಂದ ಕುಂದಾಪುರ ಪರಿಸರದಲ್ಲಿ ಹಸಿದವರಿಗೆ ಪ್ರತಿ ದಿನ 240ಕ್ಕೂ ಹೆಚ್ಚು ಊಟದ ವ್ಯವಸ್ಥೆ ಮಾಡುತ್ತಿದೆ. 36ನೇ ದಿನದ ಊಟದ ಪ್ರಾಯೋಜಕತ್ವವನ್ನು ಎಡ್ವರ್ಡ್ ಮೆಮೇರಿಯಲ್ ಕ್ಲಬ್ ಕುಂದಾಪುರ ಇವರು ವಹಿಸಿದ್ದರು. ಜೂನ್ 2ರಿಂದ ಜೂನ್ 5ರ ಈ ಸಂಸ್ಥೆ ಊಟದ ಪ್ರಾಯೋಜಕತ್ವ ವಹಿಸಿದೆ.


ಜೂ. 2ರಂದು ಮಧ್ಯಾಹ್ನ ಊಟ ನೀಡುವ ಅಭಿಯಾನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಎಸ್‌ಐ ಸದಾಶಿವ ಗೌವರೋಜಿ ಹಾಗೂ ಎಡ್ವರ್ಡ್ ಮೆಮೇರಿಯಲ್ ಕ್ಲಬ್ ಕುಂದಾಪುರ, ನಾಗರಾಜ ಕಾಮಧೇನು, ಸದಾನಂದ ಶೆಟ್ಟಿ, ಕಾಳಾವರ ಉದಯಕುಮಾರ ಶೆಟ್ಟಿ, ಶಶಿಧರ ಶೆಟ್ಟಿ ಮಡಾಮಕ್ಕಿ, ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ವಿಜಯ ಕುಮಾರ ಶೆಟ್ಟಿ ಸಮತಾ, ಅಶೋಕ ಬೆಟ್ಟಿನ್, ಸತೀಶ ಶೆಟ್ಟಿ, ಜೆಸಿ‌ಐ ಕುಂದಾಪುರ ಸಿಟಿಯ ಅಧ್ಯಕ್ಷ ವಿಜಯ ಭಂಡಾರಿ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ವಲಯ ಉಪಾಧ್ಯಕ್ಷ ನಾಗೇಶ್ ನಾವಡ, ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್, ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ಶ್ರೀಧರ್ ಸುವರ್ಣ, ಉಪಾಧ್ಯಕ್ಷ ಅಭಿಲಾಶ್, ಸದ್ಯಸ್ಯರಾದ ನಾಗಪ್ರಸಾದ್, ಜೇಸಿರೇಟ್ ಅಧ್ಯಕ್ಷೆ ಡಾ. ಸೋನಿ, ಕಾರ್ಯದರ್ಶಿ ಡಾ. ಅಶ್ವತಿ ಇನ್ನಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!