spot_img
Friday, February 6, 2026
spot_img

ಬಸ್ರೂರು: ಗ್ರಾಮೀಣ ಕ್ರೀಡಾಕೂಟ ಮೈಕೆಸ್ರ್ ಉದ್ಘಾಟನೆ

ಬಸ್ರೂರು: ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದ ನೇತೃತ್ವದಲ್ಲಿ ಗ್ರಾಮೀಣ ಕ್ರೀಡಾಕೂಟ ‘ಮೈಕೆಸ್ರ್’ ಫೆ.1ರಂದು ಮೂಡ್ಲಕಟ್ಟೆಯ ದೊಡ್ಮನೆ ಜೆ.ಪಿ ಶೆಟ್ಟಿಯವರ ಗದ್ದೆಯಲ್ಲಿ ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಎ ಕಿರಣ ಕುಮಾರ್ ಕೊಡ್ಗಿ ನೆರವೇರಿಸಿದರು. ಬಸ್ರೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಬೇಳೂರು ದಿನಕರ ಶೆಟ್ಟಿ, ಕಂದಾವರ ಅಧ್ಯಕ್ಷರಾದ ಅನುಪಮ ಶೆಟ್ಟಿ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶೀನ ಪೂಜಾರಿ ಹಾಗೂ ಇನ್ನಿತರು ಇದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನೂರಾರು ಸಂಖ್ಯೆಯಲ್ಲಿ ಮಕ್ಕಳು, ಪುರುಷರು ಹಾಗೂ ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸಿ ಖುಷಿಪಟ್ಟರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ರಾಕೇಶ್ ಜಿ ಕೆಳಮನೆ, ಉಮೇಶ್ ಆಚಾರ್ಯ, ಕೃಷ್ಣ ಕಳಂಜಿ, ರಾಜೇಶ್ ಗಾಣಿಗ, ಅಶೋಕ ಕೆರೆಕಟ್ಟೆ, ವಿವೇಕಾನಂದ, ನಾಗಭೂಷಣ್, ಅಶೋಕ ಬಿ.ಕೆ. ನಾಗರಾಜ ಗಾಣಿಗ ಬಳ್ಕೂರು, ಮುರುಳಿಧರ, ವಸಂತ ಉಡುಪ, ನಿರೂಪಮಾ ಹೆಗ್ಡೆ, ಪೂರ್ಣಿಮಾ, ಸಾರಿಕಾ ಅಶೋಕ, ಅಭಿಜಿತ್ ಕೊಠಾರಿ, ಜಗದೀಶ್ ಮೂಡ್ಲಕಟ್ಟೆ, ನಿವೃತ್ತ ಯೋಧರಾದ ಸತ್ಯನಾರಾಯಣ ಶೆಟ್ಟಿಗಾರ್, ಹಾಗೂ ದೀಪಕ್ ಕುಮಾರ್ ಮತ್ತು ಇನ್ನಿತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಅಂಗನವಾಡಿ ಶಿಕ್ಷಕರಿಗೆ ಹಾಗೂ ಸಹಾಯಕರಿಗೆ ಗ್ರಾಚುವಿಟಿ ಸೌಲಭ್ಯ ಒದಗಿಸಲು ಶಾಸಕ ಗಂಟಿಹೊಳೆ ಸದನದಲ್ಲಿ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಅಂಗನವಾಡಿ ಶಿಕ್ಷಕರಾಗಿ ಹಾಗೂ ಸಹಾಯಕರಾಗಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಈಗಾಗಲೇ ನಿವೃತ್ತರಾದವರು ತಮ್ಮ ಸೇವಾವಧಿಯಲ್ಲಿ ಅತೀ ಕಡಿಮೆ ಗೌರವ ಧನದಲ್ಲಿ ಸೇವೆ ಸಲ್ಲಿಸಿ, ಯಾವುದೇ ಇತರೆ ಸೌಲಭ್ಯಗಳಿಲ್ಲದೇ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!