spot_img
Wednesday, November 19, 2025
spot_img

ಡಾ.ಜಿ.ಶಂಕರ್ ಅವರ 70ನೇ ಹುಟ್ಟುಹಬ್ಬ: ಕುಂದಾಪುರ ಘಟಕದ ವತಿಯಿಂದ ಹಣ್ಣುಹಂಪಲು ವಿತರಣೆ

ಕುಂದಾಪುರ: ನಾಡೋಜ ಡಾ.ಜಿ.ಶಂಕರ್ ಅವರ ೭೦ನೇ ಹುಟ್ಟುಹಬ್ಬದ ಪ್ರಯುಕ್ತ ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಕುಂದಾಪುರ ಘಟಕದ ವತಿಯಿಂದ ಅ.೫ರಂದು ಕುಂದಾಪುರದ ಶ್ರೀಮತಿ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳದ ಡಾ.ಚಂದ್ರ ಮರಕಾಲ, ಮುಖ್ಯ ವೈದ್ಯರಾದ ಡಾ.ನಾಗೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಿ. ಶಂಕರ್ ರವರಿಗೆ ಶುಭ ಹಾರೈಸಿದರು.

ಕುಂದಾಪುರ ಘಟಕದ ಅಧ್ಯಕ್ಷರಾದ ನಾಗೇಶ್ ಮೊಗವೀರ ಹಳನಾಡು. ಮಾಜಿ ಜಿಲ್ಲಾಧ್ಯಕ್ಷರಾದ ಸದಾನಂದ್ ಬಳ್ಕೂರು, ಘಟಕದ ಕಾರ್ಯದರ್ಶಿ ಮಾಧವ್, ಮತ್ತು ಎಲ್ಲ ಮಾಜಿ ಅಧ್ಯಕ್ಷರುಗಳು. ಪದಾಧಿಕಾರಿಗಳು. ಮಹಿಳಾ ಪದಾಧಿಕಾರಿಗಳು, ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು. ತದ ನಂತರ ಜಿ.ಶಂಕರ್ ಅವರಿಗೆ ದೀರ್ಘಾಯುಷ್ಯ, ಆರೋಗ್ಯ ಭಾಗ್ಯ ಇನ್ನು ಹೆಚ್ಚಿನ ಸಂಪತ್ತು ನೀಡಿ ಇನ್ನು ಹೆಚ್ಚಿನ ಸಮಾಜ ಸೇವೆ ಮಾಡಲೆಂದು ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ನೀಡಿ ಪ್ರಾರ್ಥಿಸಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!