spot_img
Thursday, March 12, 2026
spot_img

ಬಸ್ರೂರಿನ ಗುಡಿಗಾರ್ ಕಟ್ಟೆ ಬಳಿ ಬೃಹತ್ ಶಿಲಾಯುಗದ ನಿಲಿಸುಗಲ್ಲು ಪತ್ತೆ

ಕುಂದಾಪುರ : ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಬಸ್ಟಾಂಡ್ ನಿಲ್ದಾಣದ ಸಮೀಪ ಬೃಹತ್ ಶಿಲಾಯುಗದ ನಿಲಿಸುಗಲ್ಲು ಪತ್ತೆಯಾಗಿದೆ.

ಸಾಮಾನ್ಯ ಶಕ ಪೂರ್ವ ವರ್ಷ (ಕ್ರಿ.ಪೂ)1 ಸಾಮಾನ್ಯ ಶಕ. ವರ್ಷ(ಕ್ರಿ.ಶ) ರಿಂದ. 1 ರ ಅಂದರೆ ಸರಿ ಸುಮಾರು ಎರಡು ಸಾವಿರ ವರ್ಷದ ಪ್ರಾಚೀನವಾದ ನಿಲಿಸು ಗಲ್ಲು ಪತ್ತೆಯಾಗಿದೆ.

ಮಣ್ಣಿನ ಮೇಲ್ಭಾಗದ ಎತ್ತರ 4.51 ಅಡಿ ಅಂದರೆ 130ಸೆಂಟಿಮೀಟರ್, ಮೇಲ್ಭಾಗದ ದಪ್ಪ 20 ಸೆಂಟಿಮೀಟರ್ ಹಾಗೂ ಮಧ್ಯಭಾಗದ ದಪ್ಪ 40 ಸೆಂಟಿಮೀಟರ್ ಕಲ್ಲು ತ್ರಿಕೋನ ಶೈಲಿಯಲ್ಲಿ ಕಂಡು ಬಂದಿದೆ.

ಇತಿಹಾಸದಲ್ಲಿ ಸಮಾಧಿಯ ಸ್ಥಳದಲ್ಲಿ ನೆನಪಿನ ಕಲ್ಲುಗಳನ್ನು ಹಾಕಲಾಗುತ್ತಿದ್ದರು. ಬೃಹತ್ ಶಿಲಾಯುಗದ ಸಮಾಧಿ ಸ್ಥಳದಲ್ಲಿ ಸಮಾಧಿಯ ಸಂಕೇತವಾಗಿ ಈ ರೀತಿಯ ಕಲ್ಲುಗಳನ್ನು ನಿಲ್ಲಿಸುತ್ತಿದ್ದರು. ಆ ಕಲ್ಲುಗಳಿಗೆ ನಿಲಿಸುಗಲ್ಲು ಅಧವಾ ಮೆನ್ಹಿರ್ ಎಂದು ಕರೆಯುತ್ತಾರೆ.
ಡಾ.ಪಿ.ಗುರುರಾಜ್ ಭಟ್ ಇವರ ಸ್ಟಡಿ ಆಫ್ ತುಳುವ ಹಿಸ್ಟರಿಯಲ್ಲಿ ಬಸ್ರೂರು ಸರಕಾರಿ ಪ್ರೌಢ ಶಾಲೆಯ ಆಟದ ಮೈದಾನದಲ್ಲಿದ್ದ ಬಂಡೆ ಕಲ್ಲು ಶಿಲ್ಪವಿರುವುದರ ಬಗ್ಗೆ ಮಾಹಿತಿ ನೀಡಿದ್ದರು. ಕಳೆದ ನಾಲ್ಕೈದು ವರ್ಷದ ಹಿಂದೆ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಬೃಹತ್ ಶಿಲಾಯುಗದ ನಿಲಿಸು ಗಲ್ಲು ಇರುವ ಬಗ್ಗೆ ಬೆಳಕಿಗೆ ಚೆಲ್ಲಿದ್ದು, ಇದೀಗ ಎರಡನೇ ನಿಲಿಸುಗಲ್ಲು ಪತ್ತೆಯಾಗಿದೆ.

ಸರಿ ಸುಮಾರು ಐದು ಅಡಿ ಉದ್ದ ಇರುವ ಈ ಕಲ್ಲು ಕಾಂಪೌಂಡ್ ಗೆ ತಾಗಿಕೊಂಡಿದ್ದು ,ಕೆಳ ಭಾಗ ದಪ್ಪವಾಗಿದ್ದು ಮೇಲ್ಭಾಗ ಸ್ವಲ್ಪ ಸಪೂರವಾಗಿ ಕಂಡುಬಂದಿದೆ.

ನಿಲಿಸುಗಲ್ಲುಗಳನ್ನು ಭಾರತೀಯ ಇತಿಹಾಸ ಸಂಕಲನ ಸಮಿತಿ ಜಿಲ್ಲಾ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹಚ್ಚಿದ್ದು ಇವರಿಗೆ ಮಾರ್ಗದರ್ಶನವನ್ನು ಭಾರತೀಯ ಇತಿಹಾಸ ಸಂಕಲನ ಸಮಿತಿ ರಾಜ್ಯ ಕಾರ್ಯದರ್ಶಿ ಕೃಷ್ಣಮೂರ್ತಿ ಆರ್ , ನಿವೃತ್ತ ಪೆÇ್ರ ಟಿ. ಮುರುಗೇಶ್,ಕೆ.ಬಿ. ಶಿವತಾರಕ,ಧನಪಾಲ್ (ಕರ್ನಾಟಕ ಇತಿಹಾಸ ಅಕಾದೆಮಿ ಕಾರ್ಯಕಾರಿಣಿ ಸದಸ್ಯರು),ಶ್ರೀ ಶ್ರೇಯಾಸ್ ಭಟ್ ಹಾಗೂ ಶ್ರೀ ಗೌತಮ್ ಹಾಗೂ ಕುಮಾರಿ ಕವಿತಾ ಆಚಾರ್ಯ ಮುದೂರು, ಸಹಕಾರದಲ್ಲಿ ಪತ್ತೆ ಹಚ್ಚಲಾಗಿದೆ.

”ಬಸರೂರು/ಬಸ್ರೂರು/ ಬಸುರೆಪಟ್ಟಣ ಎಂದು ಚಾರಿತ್ರಿಕವಾಗಿ ಗುರುತಿಸಲ್ಪಟ್ಟಿರುವ ಇಂದಿನ ಬಸ್ರೂರು ಕುಂದಾಪುರ ನಗರದ ದು ಒಂದು ಭಾಗ. ಆದರೆ, ಪ್ರಾಚೀನ ತುಳುನಾಡಿನ ಬಂದರು ನಗರ, ವಾಣಿಜ್ಯ ಕೇಂದ್ರ. ಈ ನಗರದ ಕೋಟಿ ಆಂಜನೇಯ ದೇವಾಲಯದ ಬಳಿ, ಬೃಹತ್ ಶಿಲಾಯುಗದ ನಿಲ್ಸ್ ಕಲ್ ಪತ್ತೆಯಾಗಿತ್ತು. ಈಗ, ಇದೇ ಬಸ್ರೂರಿನಲ್ಲಿ ಮತ್ತೊಂದು ಬೃಹತ್ ಶಿಲಾಯುಗದ ನಿಲ್ಸ್ ಕಲ್ ಪತ್ತೆಯಾಗಿದೆ. ಸುಮಾರು 5 ಅಡಿ ಎತ್ತರದ ಈ ನಿಲುವುಗಲ್ಲು, ಪಶ್ಚಿಮೋತ್ತರವಾಗಿ ಮುಖಮಾಡಿದೆ. ಸ್ಥಳೀಯ ನೀಸ್ ಅಥವಾ ಪಾಂಡುಕಲ್ಲನ್ನು ಈ ಸಮಾಧಿ ರಚನೆ ಬಳಸಲಾಗಿದೆ. ಆದ್ದರಿಂದ ಇದು ಸರಿ ಸುಮಾರು ಸಾಮಾನ್ಯ ಶಕ ಪೂರ್ವ(ಕ್ರಿ.ಪೂ) 1 ಅಥವಾ ಸಾಮನ್ಯ ಶಕ(ಕ್ರಿ.ಶಕ )1 ನೇ ಶತಮಾನದ ರಚನೆ ಆಗಿರಬಹುದೆಂದು ಇತಿಹಾಸ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.”
-ಪ್ರೋ.  ಟಿ.ಮುರುಗೇಶಿ
ನಿವೃತ್ತ ಸಹ ಪ್ರಾಧ್ಯಾಪಕರು
ಸ್ಥಾಪಕ ಸದಸ್ಯರು, ಆದಿಮ ಕಲಾ ಟ್ರಸ್ಟ್ (ರಿ) ಉಡುಪಿ

 

”ಬೃಹತ್ ಶಿಲಾಯುಗ ಅಥವಾ Iron age ಇದರ ಕಾಲ ಸುಮಾರು ಸಾಮಾನ್ಯ ಪೂರ್ವ ಶಕ (ಕ್ರಿ . ಪೂ) 1000 ವರ್ಷಗಳು. ತಮ್ಮ ಆಪ್ತರ ಶವಗಳನ್ನು ಹೂಳುವಾಗ ನೆನಪಿಗಾಗಿ ಇಂತಹ ಕಲ್ಲುಗಳನ್ನು ವಿವಿಧ ಗಾತ್ರ ಮತ್ತು ಆಕಾರಗಳಲ್ಲಿ ಇಡುತ್ತಿದ್ದರು. ಈ ಕಲ್ಲುಗಳು ಪ್ರಪಂಚದ ವಿವಿಧ ಸಂಸ್ಕೃತಿಗಳಲ್ಲೂ ಕಂಡುಬರುತ್ತದೆ. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಇದು ಕಾಣಬಹುದು. ಪ್ರದೀಪ್ ಬಸ್ರೂರು ಅವರು ಶೋಧಿಸಿರುವ ಈ ಕಲ್ಲು ಎಂದು -ಪ್ರೋಫೆಸರ್ ಟಿ ಮುರುಗೇಶ್ ಅವರು ನೀಡಿರುವ ಹೇಳಿಕೆಯ ಪ್ರಕಾರ ಸ್ಪಷ್ಟವಾಗುತ್ತದೆ. ಆದ್ದರಿಂದ ಸಂಶೋಧನೆಯನ್ನು ಇನ್ನು ಮುಂದುವರಿಸಿ ಅದರ ಅಕ್ಕಪಕ್ಕ ಈಗಲೂ ಯಾವುದಾದರೂ ಸ್ಮಶಾನ ಅಥವಾ ಬರಿಯಲ್ ಗ್ರೌಂಡ್ ಇರುವ ಲಕ್ಷಣಗಳನ್ನು ಗುರುತಿಸಿದರೆ ಸಂಶೋಧನೆಗೆ ಇನ್ನಷ್ಟು ಮಹತ್ವ ಸಿಗುತ್ತದೆ”
-ಕೃಷ್ಣಮೂರ್ತಿ ಆರ್
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ತಜ್ಞರು, ಬೆಂಗಳೂರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!