spot_img
Sunday, February 15, 2026
spot_img

ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ: ಅಧ್ಯಕ್ಷರಾಗಿ ಎಚ್.ಮಂಜಯ್ಯ ಶೆಟ್ಟಿ ಆಯ್ಕೆ

ಜನಪ್ರತಿನಿಧಿ ವಾರ್ತೆ| (ಕುಂದಾಪುರ) ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಸಾಲಿನ ಅಧ್ಯಕ್ಷರಾಗಿ ಎಚ್.ಮಂಜಯ್ಯ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸತೀಶ ಶೆಟ್ಟಿ ಆಲೂರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ರಘುರಾಮ ದೇವಾಡಿಗ ಆಲೂರು, ಸೂಲ್ಯ ಪೂಜಾರಿ ನಾರ್ಕಳಿ ಹರ್ಕೂರು, ಗೋಪಾಲ ಆಲಿಯಾಸ್ ಗೋವಿಂದ ಹಳ್ಳದನೀರು, ಹೊಯ್ಯಾಣ, ಸಂತೋಷ ಕುಮಾರ ಶೆಟ್ಟಿ ಆಲೂರು, ಚಂದ್ರಶೇಖರ ಶೆಟ್ಟಿ ಎಮ್, ಹಕ್ಲಮನೆ, ಗೋಳಿಕೆರೆ ಆಲೂರು, ಅಮರನಾಥ ಶೆಟ್ಟಿ ನಾರ್ಕಳಿ ಹಳ್ಳಿಜಡ್ಡು ಹರ್ಕೂರು, ಅಕ್ಕಯ್ಯ ಯಾನೆ ಆಶಾ ಸಸಿಹಿತ್ಲು, ಆಲೂರು. ಲಲಿತಾ ಕುಲಾಲ, ಪೇಟೆ ಆಲೂರು, ರಾಜೇಶ ಎನ್.ಡಿ ಆಲೂರು, ಸುರೇಶ ಆಲೂರು, ಸುರೇಂದ್ರ ಮಧುಕೊಡ್ಲು, ನಾರ್ಕಳಿ ಉಪಸ್ಥಿತರಿದ್ದರು.

ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್ ಸಿ.ಎಮ್ ಆಯ್ಕೆ ಪ್ರಕ್ರಿಯೆ ನಿರ್ವಹಿಸಿದರು. ವ್ಯವಸ್ಥಾಪಕರಾದ ಸಂಜೀವ ಪೂಜಾರಿ ಆಲೂರು ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವರಾಮ ಪೂಜಾರಿ ವಂದಿಸಿದರು.

ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರ ಸಂಘ ನಿ., ಆಲೂರು ಇದರ ನಿರ್ದೇಶಕ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲಾ ನಿರ್ದೇಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಸತತವಾಗಿ ಮೂರನೇ ಬಾರಿಗೆ ಇಲ್ಲಿ ಅವಿರೋಧ ಆಯ್ಕೆ ನಡೆದಿತ್ತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!