spot_img
Sunday, February 15, 2026
spot_img

ಸರಕಾರಿ ಸ್ವಾಮ್ಯದ ಸ್ವತ್ತುಗಳನ್ನು ಮಿತ್ರರಿಗೆ ಬಿಟ್ಟು ಕೊಡುವುದೇ ಪ್ರಧಾನಿಯವರ ಬಹು ದೊಡ್ಡ ಆರ್ಥಿಕ ನೀತಿ : ಪರಕಾಲ ಪ್ರಭಾಕರ್‌ ಟೀಕೆ

ಜನಪ್ರತಿನಿಧಿ (ಬೆಂಗಳೂರು) : ”ದೇಶದ ಬಡವರಿಗೆ ಅಕ್ಕಿ, ಸಿಲಿಂಡರ್‌ ಕೊಟ್ಟು ಸರಕಾರಿ ಸ್ವಾಮ್ಯದ ಸ್ವತ್ತುಗಳನ್ನು ತಮ್ಮ ಮಿತ್ರರಿಗೆ ಬಿಟ್ಟು ಕೊಡುವುದೇ ಪ್ರಧಾನಿಯವರ ಬಹು ದೊಡ್ಡ ಆರ್ಥಿಕ ನೀತಿಯಾಗಿದೆ,” ಎಂದು ಆರ್ಥಿಕ ತಜ್ಞ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಡಾ. ಪರಕಾಲ ಪ್ರಭಾಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಸ್ತ್ರದ ಮೂಲಕ ಹರಿಹಾಯ್ದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ”ವಿಮಾನ ನಿಲ್ದಾಣ, ಬಂದರು ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಭಾರೀ ಮೊತ್ತದ ಟೆಂಡರ್‌ಗಳನ್ನು ಪ್ರಧಾನಿ ತಮ್ಮ ಮಿತ್ರರಿಗೆ ಕೊಡುತ್ತಿದ್ದಾರೆ. ಭಾರತದ ಶೇ. 40ರಷ್ಟು ಸಂಪತ್ತು ಕೇವಲ ಶೇ. 1ರಷ್ಟು ಜನ ಉಪಯೋಗಿಸುತ್ತಿದ್ದು, ಅಸಮಾನತೆ ಹೋಗಲಾಡಿಸಲಾಗದ ಸ್ಥಿತಿ ತಲುಪಿದೆ. ದೇಶದ ಉಳಿತಾಯದ ಪ್ರಮಾಣ ಶೇ. 5 ರಷ್ಟಿದ್ದರೆ, ಸಾಲದ ಪ್ರಮಾಣ ಶೇ. 40ರಷ್ಟಾಗಿದೆ. ಪಕ್ಕದ ಬಾಂಗ್ಲಾದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ. 12ರಷ್ಟಿದ್ದರೆ, ಭಾರತದಲ್ಲಿ ಅದು ಶೇ. 24ಕ್ಕೆ ತಲುಪಿದೆ. ಖಾಸಗಿ ಬಂಡವಾಳ ಹೂಡಿಕೆ ಕುಸಿದಿದೆ. ಕೇಂದ್ರ ಆರ್ಥಿಕತೆಗೆ ಸಂಬಂಧಿಸಿದ ಅಂಕಿ -ಅಂಶಗಳನ್ನು ಬಚ್ಚಿಡುತ್ತಿದೆ,” ಎಂದು ಆಪಾದಿಸಿದರು.

‘ಅಕ್ರಮ ಹಣ ಸಾಗಣೆ, ಭ್ರಷ್ಟಾಚಾರ ಸೇರಿದಂತೆ ವಿವಿಧ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಂಪನಿಗಳು ಚುನಾವಣಾ ಬಾಂಡ್‌ ಖರೀದಿಸಿ ಪಕ್ಷಗಳಿಗೆ ಹಣ ಸಂದಾಯ ಮಾಡಿವೆ. ಹೀಗೆ ಸಂದಾಯ ಮಾಡಿದ ಕಂಪನಿಗಳಿಗೆ ಸಾಕಷ್ಟು ಸರಕಾರಿ ಟೆಂಡರ್‌ಗಳನ್ನು ನೀಡಲಾಗಿದೆ. ಇದು ಜಗತ್ತಿನ ದೊಡ್ಡ ಹಗರಣವಾಗಿದೆ. ಈ ಚುನಾವಣಾ ಬಾಂಡ್‌ ಅನ್ನು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ನಂತರವೂ ದೇಶದ ಮಹಾಪ್ರಭುಗಳು, ಇದನ್ನು ವಿರೋಧಿಸುವವರು ಪಶ್ಚಾತ್ತಾಪ ಪಡುತ್ತಾರೆ ಎಂದು ನೀಡಿರುವ ಹೇಳಿಕೆ ಏನನ್ನು ಸೂಚಿಸುತ್ತದೆ,” ಎಂದು ಪ್ರಶ್ನಿಸಿದರು.

“ದೇಶ ಎದುರಿಸುತ್ತಿರುವ ಅಪಾಯದ ಬಗ್ಗೆ ನಾಗರಿಕ ಸಮಾಜ ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಭಾರತದಲ್ಲಿ ಸ್ವತಂತ್ರ ಚುನಾವಣೆ ನಡೆಯುವುದಿಲ್ಲ. ದೇಶದ ಉದ್ದಗಲಕ್ಕೂ ಮಣಿಪುರದಂತಹ ಘಟನೆಗಳು ಮರುಕಳಿಸಲಿವೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆಡಳಿತ ವ್ಯವಸ್ಥೆಯಲ್ಲಿ ಹಿಂದುತ್ವ ಬಳಸಿಕೊಳ್ಳುವುದರಿಂದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ” ಎಂದು ಅವರು ಕಟುವಾಗಿ ಟೀಕಿಸಿದರು.

ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ, ಶಿಕ್ಷಣ ತಜ್ಞ ನಿರಂಜನರಾಧ್ಯ, ಲೇಖಕ ಆಕಾರ್‌ ಪಟೇಲ್‌, ದಲಿತ ಸಂಘಟನೆಯ ನಿರ್ಮಲಾ, ಜಾನಕಿ ನಾಯರ್‌, ಸಲೀಲ್‌ ಶೆಟ್ಟಿ, ಇಂದೂಧರ ಹೊನ್ನಾಪುರ, ಪ್ರೊ. ಎ.ಆರ್‌. ವಾಸವಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!