Sunday, September 8, 2024

ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಮುಷ್ಠಿ ಕಾಣಿಕೆ ಸಮರ್ಪಣೆ

ಕುಂದಾಪುರ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸೌಕೂರು ಗುಲ್ವಾಡಿ ಇಲ್ಲಿ ಫೆ.18ರಂದು ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಮುಷ್ಠಿಕಾಣಿಕೆ ಸಮರ್ಪಣೆ ನಡೆಯಿತು.

ಪ್ರಧಾನ ಅರ್ಚಕರಾದ ಎಸ್ ಅನಂತ ಅಡಿಗ ಹಾಡಿಮನೆ ಸೌಕೂರು ಮತ್ತು ತಂತ್ರಿಗಳಾದ ವೇ.ಮೂ. ಉದಯ ಅಡಿಗ ಕೊಡ್ಲಾಡಿ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬೆಳಿಗ್ಗೆ 8 ಗಂಟೆಗೆ ಮುಷ್ಠಿಕಾಣಿಕೆ ಸಮರ್ಪಣೆ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎನ್ ಮಂಜಯ್ಯ ಶೆಟ್ಟಿ ಸಬ್ಲಾಡಿ ಮುಷ್ಠಿ ಕಾಣಿಕೆ ಅರ್ಪಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪ್ರತಾಪಚಂದ್ರ ಶೆಟ್ಟಿ ಸೌಕೂರು ಸೇರ್ವೆಗಾರಮನೆ, ಸುಭಾಸ್ ಶೆಟ್ಟಿ ಬಾಂಡ್ಯ, ಪಿ.ಕಿಶನ್ ಹೆಗ್ಡೆ ಸೌಕೂರು ಭಂಡಾರಮನೆ, ಸುಬ್ಬಣ್ಣ ಶೆಟ್ಟಿ ಬಾಂಡ್ಯ, ಸುಧೀರ ಹೆಗ್ಡೆ ಭಂಡಾರಮನೆ, ಶೇಖರ ಪೂಜಾರಿ ಗುಲ್ವಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಜೀರ್ಣೋದ್ಧಾರ ಸಮಿತಿ ಸದಸ್ಯರು, ಗ್ರಾಮಸ್ಥರು, ಊರ-ಪರ‌ಊರ ಭಕ್ತಾಧಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!