Sunday, September 8, 2024

ಸುಳ್ಳನ್ನು ಸಾರ್ವಜನಿಕರ ಮುಂದೆ ಹೇಳುವುದು ರಾಹುಲ್‌ ಗಾಂಧಿಯವರ ಹೊಸ ನೀತಿ : ಅಮಿತ್‌ ಶಾ

ಜನಪ್ರತಿನಿಧಿ (ನವ ದೆಹಲಿ ) : ಸುಳ್ಳನ್ನು ಸೃಷ್ಟಿಸುವುದು ಹಾಗೂ ಸುಳ್ಳನ್ನು ಸಾರ್ವಜನಿಕರ ಮುಂದೆ ಹೇಳುವುದು ರಾಹುಲ್‌ ಗಾಂಧಿಯವರ ಹೊಸ ನೀತಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸುಳ್ಳು ಹೇಳುವುದು ಮತ್ತು ಅದೇ ಸುಳ್ಳನ್ನು ಮತ್ತೆ ಮತ್ತೆ ಹೇಳುವ ಚಾಳಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಜಾತಿ ಕುರಿತು ಚರ್ಚಿಸುತ್ತಿರುವುದು ದೌರ್ಭಾಗ್ಯಕರ ವಿಷಯ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರಿಗೆ ಜಾತಿ ಮತ್ತು ಬ್ಲಾಕ್‌ಗಳ ನಡುವಿನ ವ್ಯತ್ಯಾಸ ತಿಳಿದಿಲ್ಲ. ಇಷ್ಟಕ್ಕೂ ಒಬಿಸಿ ಸಮುದಾಯಗಳಿಗೆ ಕಾಂಗ್ರೆಸ್‌ ಕೊಡುಗೆ ಏನು ? ಎಂದು ಪ್ರಶ್ನಿಸಿದ್ದಲ್ಲದೇ, ಪ್ರಧಾನಿ ಮೋದಿ ಸರ್ಕಾರ ಒಬಿಸಿ ಸಮುದಾಯಗಳಿಗೆ ಸಾಂವಿಧಾನಿಕ ಮಾನ್ಯತೆ ನೀಡಿದೆ. ಒಬಿಸಿಗಳಿಗೆ ಆಯೋಗವನ್ನು ರಚಿಸಿದ್ದು, ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದೆ ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!