Sunday, September 8, 2024

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ: ಯಕ್ಷ ಸಪ್ತೋತ್ಸವ-2024 ಸಮಾರೋಪ

ಸಾಸ್ತಾನ: ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಐವತ್ತರ ಸಂಭ್ರಮದ ಸಂದರ್ಭದಲ್ಲಿ ಕಲಾಕೇಂದ್ರದಲ್ಲಿ ನಡೆದ ಯಕ್ಷೋತ್ಸವ 2024 ಇದರ ಸಮಾರೋಪ ಸಮಾರಂಭ ಹಾಗು ದೊಂದಿ ಬೆಳಕಿನ ಯಕ್ಷಗಾನ ರವಿವಾರ ಜರಗಿತು.
ಕಲಾಕೇಂದ್ರದ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ಆನಂದ ಕುಂದರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲ ಪಾದೆಕಲ್ಲು ವಿಷ್ಣು ಭಟ್ಟ, ಹೈದರಾಬಾದ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಕುಂದಾಪುರ ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆದರ್ಶ ಹೆಬ್ಬಾರ್, ನ್ಯಾಯವಾದಿ ಮಂಜುನಾಥ ಎಸ್.ಕೆ., ಸಾಂಸ್ಕೃತಿಕ ಸಮಿತಿಯ ರಾಜೇಶ ಉಪಾಧ್ಯ ಉಪಸ್ಥಿತರಿದ್ದರು.

ಯಕ್ಷೋತ್ಸವದ ನೆನಪಿನಲ್ಲಿ ಸ್ಥಳೀಯ ಪತ್ರಿಕಾ ವಿತರಕರಾದ ವೈಕುಂಠ ಪೈ ಸಾಸ್ತಾನ, ರಮೇಶ ಉಡುಪ ಸಾಲಿಗ್ರಾಮ ಹಾಗು ನಾಗೇಶ ಹೆಗ್ಡೆ ಅವರನ್ನು ಗೌರವಿಸಲಾಯಿತು.

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘ ಶ್ಯಾಮ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಕ್ಷಮಾ ಹೆಬ್ಬಾರ್ ವಂದಿಸಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!