Sunday, September 8, 2024

ಅಧಿಕಾರದಲ್ಲಿದ್ದಾಗ ಉತ್ತಮ ಆಡಳಿತ ಪಕ್ಷವಾಗಿರಲಿಲ್ಲ, ಜನ ತಿರಸ್ಕರಿಸಿದಾಗ ಉತ್ತಮ ವಿರೋಧ ಪಕ್ಷವಾಗಿಲ್ಲ : ಬಿಜೆಪಿಯನ್ನು ತಿವಿದ ಕಾಂಗ್ರೆಸ್‌

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಅಧಿಕಾರದಲ್ಲಿದ್ದಾಗ ಉತ್ತಮ ಆಡಳಿತ ಪಕ್ಷವಾಗಿರಲಿಲ್ಲ, ಜನ ತಿರಸ್ಕರಿಸಿದಾಗ ಉತ್ತಮ ವಿರೋಧ ಪಕ್ಷವಾಗಿಲ್ಲ ಎಂದು ಕಾಂಗ್ರೆಸ್‌ ಟೀಕೆ ಮಾಡಿದೆ.

ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯ ಮೂಲಕ, ʼಅಧಿವೇಶನದಲ್ಲಿ ವಿಪಕ್ಷವಾಗಿ ನಮ್ಮ  ನಮ್ಮ ನಿರ್ವಹಣೆ ಸರಿಯಾಗಿಲ್ಲʼ ಎಂದು ಬಿಜೆಪಿ ಶಾಸಕ ಎಸ್.‌ ಆರ್‌ ವಿಶ್ವನಾಥ್‌ ನೀಡಿರುವ ಹೇಳಿಕೆಯ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಬಿಜೆಪಿಯನ್ನು ತಿವಿದ ಆಡಳಿತಾರೂಢ ಕಾಂಗ್ರೆಸ್‌,  ವಿರೋಧ ಪಕ್ಷವಾಗಿಯೂ ರಾಜ್ಯ ಬಿಜೆಪಿ ಆಸಮರ್ಥವಾಗಿದೆ ಎಂಬುದನ್ನು ಸ್ವತಃ ಬಿಜೆಪಿ ಶಾಸಕರೇ ಒಪ್ಪಿಕೊಂಡಿದ್ದಾರೆ ಎಂದಿದೆ.

ಮಾತ್ರವಲ್ಲದೇ, ಕರ್ನಾಟಕದಲ್ಲಿ ಬಿಜೆಪಿಯ ಅಸ್ತಿತ್ವ ಮುಗಿದ ಅದ್ಯಾಯ, ಫೇಕ್ ನ್ಯೂಸ್ ಹಬ್ಬಿಸುವುದನ್ನೇ ವಿರೋಧ ಪಕ್ಷದ ಕೆಲಸ ಎಂದು ನಂಬಿಕೊಂಡಿರುವ ಬಿಜೆಪಿ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಟೀಕೆ ಮಾಡಿದೆ,

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!