spot_img
Thursday, April 30, 2026
spot_img

ಮಾರಣಕಟ್ಟೆ ಪರಿಸರದಲ್ಲಿ ಯಶಸ್ವಿ ಕಲಾವೃಂದದ ಹೂವಿನಕೋಲು ತಂಡದ ತಿರುಗಾಟ

ಕುಂದಾಪುರ: ಯಕ್ಷ ಕಲೋಪಾಸನೆ ಹೂವಿನ ಕೋಲು ಪ್ರಕಾರದ ಮೂಲಕ ಮನೆ ಮನೆಗಳಲ್ಲಿ ನಡೆಯುತ್ತದೆ. ಚಿಣ್ಣರಿಂದ ಮುದುಕರವರೆಗೂ ಆಕರ್ಷಣೆಗೆ ಒಳಗಾಗುವ ಪ್ರಾಥಮಿಕವಾಗಿ ಮನೆಗಳಲ್ಲಿ ಬೆಳಗುವ ಕಲೆ ಇದಾಗಿದೆ. ಸುಮಾರು 200 ವರ್ಷಗಳಿಗೂ ಅಧಿಕವಾಗಿ ಇತಿಹಾಸ ಹೊಂದಿದ ಕಲೆ ಹೂವಿನಕೋಲು. ನಶಿಸಿಯೇ ಹೋಗಿದ್ದ ಈ ಕಲೆಯನ್ನು ಪುನಃ ಆರಂಭಿಸುವ ಕಾರ್ಯ ಯಶಸ್ವೀ ಕಲಾವೃಂದದಿಂದಾಗಿದೆ. ಇಷ್ಟು ದೂರ ಕ್ರಮಿಸಿ ಕೊಟ್ಟದ್ದನ್ನು ಪಡೆದುಕೊಂಡು ಹೋಗುವ ಸಂಸ್ಥೆಗೆ ಅಭಾರಿಯಾಗಿದ್ದೇವೆ. ಮನೋಜ್ಙ ಅಭಿನಯದ ಮೂಲಕ ಮನೆಯ ಮನಗಳಿಗೆ ಮುದವನ್ನು ನೀಡಿ ತೆರಳಿದ ಹೂವಿನಕೋಲು ಪ್ರಕಾರಕ್ಕೆ ಕಲಾ ಪ್ರಜ್ಞೆ ಉಳ್ಳವರು ಪ್ರೋತ್ಸಾಹಿಸಲೇ ಬೇಕಾಗಿದೆ ಎಂದು ಯಕ್ಷಗಾನ ಸಂಘಟಕ ನಾಗರಾಜ ನೈಕಂಬ್ಳಿ ಅಭಿಪ್ರಾಯ ಪಟ್ಟಿದ್ದಾರೆ.

ಕೊಮೆ, ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ನವರಾತ್ರಿಯ ಸಂದರ್ಭಗಳಲ್ಲಿ ಒಂಬತ್ತು ದಿನಗಳ ಕಾಲ ಹೂವಿನ ಕೋಲು ಕಲಾ ಪ್ರಕಾರವನ್ನು ಮಾರಣಕಟ್ಟೆ, ನೈಕಂಬ್ಳಿ ಪರಿಸರದ ಆಯ್ದ ಮನೆಗಳಲ್ಲಿ ನಡೆದ ಹೂವಿನಕೋಲು ಕಾರ್ಯಕ್ರಮದಲ್ಲಿ ಮಾತನ್ನಾಡಿದರು.

ಭಾಗವತರಾಗಿ ಪಂಚಮಿ ವೈದ್ಯ, ಮದ್ದಳೆಯಲ್ಲಿ ರಾಹುಲ್ ಅಮೀನ್, ಕಾರ್ಯದರ್ಶಿ ವೆಂಕಟೇಶ ವೈದ್ಯ, ಮುಮ್ಮೇಳ ಕಲಾವಿದರಾಗಿ ಹರ್ಷಿತ, ರಚಿತ್, ಪವನ್, ಕಿಶನ್, ಪರಿಣಿತ, ಆರಬಿ, ಅಘಮ್ಯ ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!