Sunday, September 8, 2024

ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವರ ಪ್ರವಾಸ


ಉಡುಪಿ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸೆಪ್ಟಂಬರ್ 17 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಅಂದು ಬೆಳಗ್ಗೆ 9 ರಿಂದ 9.30ರ ವರೆಗೆ ಆನೆಗುಂಡಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸ್ವಾಮಿಜಿ ಭೇಟಿ 9.45 ರಿಂದ 10ರ ವರೆಗೆ ಉಡುಪಿ ನಗರ ಬಿಜೆಪಿ ಕಾರ್ಯಕ್ರಮ. 10.30 ರಿಂದ 11ರ ವರೆಗೆ ಕೋಟದ ಮಾಂಗಲ್ಯ ಸಭಾ ಭವನದಲ್ಲಿ ನಡೆಯುವ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟನೆ. 11 ರಿಂದ ಮಧ್ಯಾಹ್ನ 12.35ರ ವರೆಗೆ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಂತರ್ಜಾಲದ ಮುಖಾಂತರ ನಡೆಯುವ ಅಂತರಾಷ್ಟ್ರೀಯ ಸಿರಿ ಧಾನ್ಯ ಉತ್ಸವದ ಉದ್ಘಾಟನಾ ಕಾರ್ಯಕ್ರಮ. 12.45 ಕ್ಕೆ ಉಪ್ಪೂರುನಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕಾರ್ಯಕ್ರಮ. 1.30 ಕ್ಕೆ ಕಾರ್ಕಳ ಬಿಜೆಪಿ ಕಚೇರಿ ಭೇಟಿ. 2 ಗಂಟೆಗೆ ಕಾರ್ಕಳದ ಬಾಹುಬಲಿ ಸಭಾ ಭವನದಲ್ಲಿ ರೈತರೊಂದಿಗೆ ಸಂವಾದ ಮತ್ತು ಭೋಜನ ಕಾರ್ಯಕ್ರಮ. 3.15 ಕ್ಕೆ ಕಾರ್ಕಳದ ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ. 4.30 ಕ್ಕೆ ಪೆರ್ಡೂರು ಮಹಾಶಕ್ತಿ ಕೇಂದ್ರಕ್ಕೆ ಭೇಟಿ ನೀಡುವರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!