spot_img
Tuesday, March 10, 2026
spot_img

ಇಸ್ರೇಲ್‌ ನಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದ ಯಕ್ಷಗಾನ

ಕುಂದಾಪುರ: ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರವಾದ ಯಕ್ಷಗಾನವು ಭಾರತವನ್ನು ಪ್ರತಿನಿಧಿಸಿದ ಬೆಂಗಳೂರಿನ ಯಕ್ಷದೇಗುಲ ತಂಡವು ಇಸ್ರೇಲ್‌ನಲ್ಲಿ ತನ್ನ ರೋಮಾಂಚಕ ಮತ್ತು ವರ್ಣಮಯ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಿತು. ಕಂಸವಧೆ ಮತ್ತು ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನ ನೀಡಿತು.

ನವೆಂಬರ್ 2 ರಂದು ಪೆಟಾ ಟಿಕ್ವಾದಲ್ಲಿ ನಡೆದ ಹಡೋಫೆನ್ ಫ್ರಿಂಜ್ ರಂಗಭೂಮಿ ಉತ್ಸವದಲ್ಲಿ ಉದ್ಘಾಟನಾ ಪ್ರದರ್ಶನವನ್ನು ಪ್ರದರ್ಶಿಸಿತು. ಈ ಪ್ರದರ್ಶನದ ಯಶಸ್ವಿ ಮತ್ತು ಅಪಾರ ಜನರ ಪ್ರಶಂಸೆಗೆ ಕಾರಣವಾಯಿತು. ಈ ಸುದ್ಧಿ ಹರಡುತ್ತಿದ್ದಂತೆ ನವೆಂಬರ್ 3 ರಂದು ಹೈಪಾ ನಗರ ಮತ್ತು 4 ರಂದು ಅಶ್ಕೆಲೋನ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಪ್ರೇಕ್ಷಕರು ಬಹಳವಾಗಿ ಸೇರಿ ಹೆಚ್ಚಿನವರು ನಿಂತು ನೋಡಬೇಕಾಯಿತು.

ಭಾರತದ ಯಕ್ಷಗಾನ ತಂಡವು ಹಡೋಫೆನ್ ಫ್ರಿಂಜ್ ಉತ್ಸವದ ನಾಲ್ಕನೆ ಆವೃತ್ತಿಯಲ್ಲಿ ಭಾಗವಹಿಸಿದ ಏಕೈಕ ಅಂತರರಾಷ್ಟ್ರೀಯ ತಂಡವಾಗಿದೆ. ಇದರಿಂದ ಇಸ್ರೇಲಿ ಪ್ರೇಕ್ಷಕರಲ್ಲಿ ಭಾರತೀಯ ಸಂಸ್ಕೃತಿಯ ಬೆಳೆಯುತ್ತಿರುವ ಅನುರಣನವನ್ನು ಒತ್ತಿ ಹೇಳುತ್ತದೆ. ಇಸ್ರೇಲ್ ನಗರಗಳ ಪುರಸಭೆಗಳು ಮತ್ತು ಹಡೋಫೆನ್ ರಂಗಮಂದಿರದ ಸಹಯೋಗದೊಂದಿಗೆ ಇಸ್ರೇಲ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಇಸ್ರೇಲ್‌ನಲ್ಲಿ ವ್ಯಾಪಕವಾದ ಚಪ್ಪಾಳೆ ಗಿಟ್ಟಿಸಿದ ಯಕ್ಷಗಾನ ಪ್ರದರ್ಶನ ಯಶಸ್ವಿ ಪ್ರದರ್ಶನವನ್ನು ಖಚಿತ ಪಡಿಸಿತು.

ಶಾಲಾ ಶಿಕ್ಷಕಿ ಓರ್ನಾರೂಚಿನ್ ತಮ್ಮ ಅಭಿಪ್ರಾಯದಲ್ಲಿ ವರ್ಣರಂಜಿತ ವೇಷಭೂಷಣಗಳನ್ನು ಧರಿಸಿದ ಪಾತ್ರಗಳು ಮತ್ತು ನರ್ತಕರು (ಕಲಾವಿದರು) ಮತ್ತು ಸಂಗೀತಗಾರರ (ಭಾಗವತರು) ಉತ್ತಮ ವೃತ್ತಿಪರತೆಯನ್ನು ನೋಡುವುದು ಆಕರ್ಷಕವಾಗಿತ್ತು. ಪ್ರತಿಯೊಂದು ಚಲನೆಯ ನಿಖರ ಮತ್ತು ಅಭಿವ್ಯಕ್ತಿವಾಗಿತ್ತು. ಬಣ್ಣಗಳು, ಲಯ ಮತ್ತು ಸಂಗೀತವು ಮಾಂತ್ರಿಕ ವಾತಾವರಣವನ್ನು ಸೃಷ್ಟಿಸಿತು.
ಸಂಗೀತಗಾರರು (ಭಾಗವತರು) ಸ್ವರಗಳನ್ನು ನೋಡದೆ ಪೂರ್ಣ ಏಕಾಗ್ರತೆಯಿಂದ ನುಡಿಸುವುದನ್ನು (ಚಂಡೆ, ಮದ್ದಳೆಯರು) ಮತ್ತು ನೃತ್ಯಗಾರರೊಂದಿಗೆ (ಮುಮ್ಮೇಳದ ಕಲಾವಿದರೊಂದಿಗೆ) ಅವರ ಪರಿಪೂರ್ಣ ಸಿಂಕ್‌ನ್ನು ನೋಡುವುದು ವಿಶೇಷವಾಗಿ ಪ್ರಭಾವಶಾಲಿಯಾಗಿತ್ತು. ಇದು ನಮ್ಮನ್ನು ಒಂದು ಕ್ಷಣ ದೂರದ ಭಾರತಕ್ಕೆ ಕರೆದೊಯ್ಯುವ ಆಕರ್ಷಕ ಸಾಂಸ್ಕೃತಿಕ ಅನುಭವವಾಗಿತ್ತು ಎಂದು ಶಿಕ್ಷಕಿ ರೂಬೆನ್ ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತದ ರಾಯಭಾರಿ ಜೆ.ಪಿ. ಸಿಂಗ್ ಮತ್ತು ಪೆಟಾ ಟಿಕ್ವಾ ಮೇಯರ್ ರಾಮಿ ಗ್ರೀನ್‌ಬರ್ಗ್ ಮಾಡಿದರು.
ಮೇಯರ್ ಗ್ರೀನ್‌ಬರ್ಗ್ ಮಾತನಾಡಿ ಭಾರತದ ಈ ಸಾಂಸ್ಕೃತಿಕ ತಂಡವು ಭಾರತ ಮತ್ತು ಇಸ್ರೇಲ್ ಸರ್ಕಾರದಿಂದ ಸರ್ಕಾರಿ ಮಟ್ಟದಲ್ಲಿ ಉತ್ತಮ ಸಂಬಂಧಗಳನ್ನು ಹಂಚಿಕೊಳ್ಳುವುದಲ್ಲದೆ, ಜನರ ನಡುವಿನ ಸಂಬಂಧವನ್ನು ಸಹ ಹಂಚಿಕೊಳ್ಳುತ್ತದೆ ಎಂದರು. ಭಾರತದ ರಾಯಭಾರಿ ಜೆ.ಪಿ. ಸಿಂಗ್ ರವರು ನಮ್ಮ ಎರಡೂ ರಾಷ್ಟ್ರಗಳು ಎಷ್ಟು ವಿಶೇಷ ಸಂಬಂಧಗಳನ್ನು ಹೊಂದಿವೆ ಎಂಬುದನ್ನು ತೋರಿಸುವ ಫ್ರಿಂಜ್ ರಂಗಭೂಮಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಯಕ್ಷದೇಗುಲ ತಂಡವು ಕರ್ನಾಟಕದಿಂದ ಬಂದಿರುವುದನ್ನು ಸಿಂಗ್ ಒತ್ತಿ ಹೇಳಿದರು. ಅಲ್ಲದೇ ನಾವು ಒಟ್ಟಿಗೆ ಸಾಗುತ್ತಿರುವ ಅತ್ಯಂತ ಸವಾಲಿನ ಸಮಯದ ನಂತರ ಈ ವರ್ಣರಂಜಿತ ತಂಡವು ನಮ್ಮ ಇಸ್ರೇಲಿನ ಸ್ನೇಹಿತರ ಜೀವನಕ್ಕೆ ಖಂಡಿತವಾಗಿಯೂ ಬಣ್ಣಗಳನ್ನು ಸೇರಿಸುತ್ತದೆ. ಯಕ್ಷದೇಗುಲ ತಂಡವು ಯಕ್ಷಗಾನ ಸಂಪ್ರದಾಯವನ್ನು ಸಂರಕ್ಷಿಸಲು ಮತ್ತು ಮರುಕಲ್ಪಿಸಲು ಸಮರ್ಪಿತವಾಗಿದೆ. ಇಸ್ರೇಲ್‌ನಲ್ಲಿ ನಡೆದ ಮೊದಲ ಯಕ್ಷಗಾನ ಪ್ರದರ್ಶನವಾಗಿದೆ. ಇದು ಪ್ರೇಕ್ಷಕರಿಗೆ ಭಾರತದ ಅತ್ಯಂತ ರೋಮಾಂಚಕ ಮತ್ತು ಅಭಿವ್ಯಕ್ತಿಶೀಲ ನಾಟಕ ಸಂಪ್ರದಾಯಗಳಲ್ಲಿ ಒಂದರ ಅಪರೂಪದ ನೋಟವನ್ನು ನೀಡುತ್ತದೆ ಎಂದರು.

ಭಾರತೀಯ ವಿದೇಶಾಂಗ ವ್ಯವಹಾರದ ಸಚಿವಾಲಯದ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತಿನ ಆಶ್ರಯದಲ್ಲಿ ನಡೆದ ಈ ಯಕ್ಷದೇಗುಲ ತಂಡದ ಉಸ್ತುವಾರಿಯನ್ನು ಕೆ. ಮೋಹನ್ ವಹಿಸಿಕೊಂಡಿದ್ದು, ಕಲಾವಿದರಾಗಿ ಸುದರ್ಶನ ಉರಾಳ, ಪ್ರಿಯಾಂಕ ಕೆ. ಮೋಹನ್, ಲಂಬೋದರ ಹೆಗಡೆ, ಸುಜಯೀಂದ್ರ ಹಂದೆ, ಉದಯ ಕಡಬಾಳ, ದಿನೇಶ್ ಕನ್ನಾರ್, ವಿಶ್ವನಾಥ ಉರಾಳ, ಸುದೀಪ ಉರಾಳ, ದೇವರಾಜ ಕರಬ, ಶ್ರೀರಾಮ ಹೆಬ್ಬಾರ್ ಮತ್ತು ಶ್ರೀ ವಿದ್ಯಾ ಭಾಗವಹಿಸಿದರು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!