spot_img
Wednesday, November 19, 2025
spot_img

ಆರ್‌.ಸಿ.ಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಒಳಗೊಂಡಂತೆ ಮೂವರ ಬಂಧನ !

ಜನಪ್ರತಿನಿಧಿ (ಬೆಂಗಳೂರು) : ಆರ್​ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಒಳಗೊಂಡಂತೆ ಮೂವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್ ಸೋಸಲೆ ಬೆಂಗಳೂರಲ್ಲಿ ವಿಕ್ಟರಿ ಪರೇಡ್ ಅಂತ ಪೋಸ್ಟ್ ಹಾಕಿದ್ದ.

ಪೊಲೀಸರ ಅನುಮತಿ ಪಡೆಯದೇ ಪೋಸ್ಟ್ ಹಾಕಿದ್ದಕ್ಕೆ ಆರ್​ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆಯನ್ನು ಅರೆಸ್ಟ್ ಮಾಡಲಾಗಿದೆ. ಮಾತ್ರವಲ್ಲದೇ ಡಿಎನ್​ಎ ಸಂಸ್ಥೆಯ ಇಬ್ಬರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಡಿಎನ್​ಎ ಸಂಸ್ಥೆಯ ಕಿರಣ್ ಮತ್ತು ಸುಮಂತ್ ಬಂಧಿತರಾಗಿದ್ದಾರೆ.

ನಿಖಿಲ್ ಸೋಸಲೆ ಬಂಧನಕ್ಕೆ ಕಾರಣಗಳೇನು?

ನಿಖಿಲ್ ಸೋಸಲೆ ಆರ್‌.ಸಿ.ಬಿ ಮ್ಯಾನೇಜ್ಮೆಂಟ್​​ನ ಮಾರ್ಕೆಟಿಂಗ್ ಹೆಡ್ ಆಗಿದ್ದ. ಇವರೇ ಸೋಷಿಯಲ್​ ಮೀಡಿಯಾದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ವಿಕ್ಟರಿ ಪರೇಡ್ ಅಂತ ಪೋಸ್ಟ್ ಹಾಕಿದ್ದಾರೆ.

ಅಲ್ಲದೇ ಪೊಲೀಸರ ಅನುಮತಿ ಪಡೆಯದೇ ಪೇಜ್​ನಲ್ಲಿ ಪರೇಡ್​​ ಬಗ್ಗೆ0 ಪೋಸ್ಟ್ ಮಾಡಿದ್ದಾರೆ. ಆದ್ರೆ ಪರೇಡ್​​ ಬಗ್ಗೆ ಕಮಿಷನರ್ ನಿರಾಕರಿಸಿದ ನಂತರ ಪೋಸ್ಟ್ ಡಿಲೀಟ್ ಮಾಡಿರಲಿಲ್ಲ. ಇಷ್ಟೇ ಅಲ್ಲದೇ ಸ್ಟೇಡಿಯಂನಲ್ಲಿ ಸೆಲೆಬ್ರೇಷನ್​​ಗೆ ಉಚಿತ ಟಿಕೆಟ್ ಅಂತ ಘೋಷಿಸಲಾಗಿತ್ತು.  ಗೇಟ್ 9 ಮತ್ತು 10ರ ಬಳಿ 1 ಗಂಟೆಗೆ ಟಿಕೆಟ್ ಸಿಗುತ್ತದೆ ಎಂದು ಹೇಳಿದ್ದರು.

ಮಧ್ಯಾಹ್ನ 3ಕ್ಕೆ ಸ್ಟೇಡಿಯಂಗೆ ಅಭಿಮಾನಿಗಳಿಗೆ ಉಚಿತ ಪ್ರವೇಶ ಅಂತ ಪೋಸ್ಟ್ ಹಾಕಲಾಗಿದೆ. ನಿಖಿಲ್ ಸೂಚನೆಯಂತೆ ಡಿಎನ್​ಎ ಮ್ಯಾನೇಜ್ಮೆಂಟ್ ಕಂಪನಿ ವರ್ತಿಸಿತ್ತು. ಈ ಪೋಸ್ಟ್​ ಹಾಕಿದ್ದಕ್ಕೆ ಲಕ್ಷಾಂತರ ಮಂದಿ ಸೇರೋದಕ್ಕೆ ಕಾರಣವಾಗಿದೆ. ಹೀಗಾಗಿಯೇ ಕಾಲ್ತುಳಿತ ಉಂಟಾಗಿ 11 ಮಂದಿ ಜೀವಬಿಟ್ಟಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!