Tuesday, October 22, 2024

ರಾಷ್ಟ್ರೀಯ ಸ್ವಯಂಸೇವಕ ಸಂಘ: ಪಥಸಂಚಲನದಲ್ಲಿ-ಶಾಸಕ ಕಿರಣ್ ಕೊಡ್ಗಿ ಭಾಗಿ

ಕುಂದಾಪುರ: ವಿಜಯದಶಮಿ ಅಂಗವಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಕುಂದಾಪುರ ತಾಲೂಕು ವತಿಯಿಂದ ಕೋಟೇಶ್ವರ ಪ್ರಮುಖ ನಗರದಲ್ಲಿ ಸಂಘದ ಸ್ವಯಂ ಸೇವಕರು ಆಕರ್ಷಕ ಪಥಸಂಚಲನ ನಡೆಸಿದರು.

ಕೋಟೇಶ್ವರ ಶಾಲಾ ಮೈದಾನದಿಂದ ಪಥಸಂಚಲನ ಆರಂಭವಾಗಿ. ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಕೋಟೇಶ್ವರದ ಶಾರದ ಕಲ್ಯಾಣ ಮಂಟಪವನ್ನು ತಲುಪಿತು.

ಗಣಧಾರಿ ಸ್ವಯಂಸೇವಕರು ಸಾಗಿದ ಮಾರ್ಗದಲ್ಲಿ ಸಾರ್ವಜನಿಕರು ಪಥಸಂಚಲನ ಬರುತ್ತಿದ್ದಂತೆ ರಸ್ತೆಯ ಎರಡೂ ಬದಿ ನಿಂತು ಹೂವು ಎರಚಿ ಅಭಿಮಾನ ಮೆರೆದರು.

ತೆರೆದ ವಾಹನದಲ್ಲಿ ಭಾರತ್ ಮಾತಾ ಭಾವಚಿತ್ರ ಹಾಗೂ ಕೇಶವ ಬಲಿರಾಮ ಹೆಡಗೇವಾರ್, ಗೋಳ್ವಾಲ್ಕರ್ ಅವರ ಭಾವಚಿತ್ರಗಳ ಮೆರವಣಿಗೆಯಲ್ಲಿ ಗಮನ ಸೆಳೆದವು. ಪಥಸಂಚಲನದಲ್ಲಿ ಸ್ವಯಂ ಸೇವಕರು ಘೋಷ್ (ಬ್ಯಾಂಡ್) ವಾದನ ಪ್ರಸ್ತುತಪಡಿಸಿದರು.

ಈ ಪಥ ಸಂಚಲನದಲ್ಲಿಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!