Sunday, September 8, 2024

ಸುದೀರ್ಘ ಸೇವೆ ಸಲ್ಲಿಸಿದ ಶಿವರಾಮ ಪೂಜಾರಿ ಅವರಿಗೆ ಶ್ರೀ ದುರ್ಗಾಂಬಾ ಸಂಸ್ಥೆಯಿಂದ ಸನ್ಮಾನ !

ಜನಪ್ರತಿನಿಧಿ (ಕುಂದಾಪುರ) : ಶ್ರೀ ದುರ್ಗಾಂಬಾ ಸಂಸ್ಥೆಯಲ್ಲಿ ಡ್ರೈವರ್ ವೃತ್ತಿಯನ್ನು ಆರಂಭಿಸಿ ಕೆರಾಡಿ ಕುಂದಾಪುರ ಮಾರ್ಗದಲ್ಲಿ ದಕ್ಷ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಬೆಳ್ಳಾಲ ಗ್ರಾಮದ ಶಿವರಾಮ ಪೂಜಾರಿ ಅವರನ್ನು ಮಾಲಿಕರಾದ ಸಚ್ಚಿದಾನಂದ ಚಾತ್ರ ಅವರು ಸನ್ಮಾನಿಸಿ ಶುಭಹಾರೈಸಿದರು.

1993 ರಿಂದ ನಿರಂತರ ಶ್ರೀ ದುರ್ಗಾಂಬಾ ಸಂಸ್ಥೆಗೆ ದುಡಿದ ಶಿವರಾಮ ಪೂಜಾರಿ ಅವರು ಒಬ್ಬ ಮಾದರಿ ಚಾಲಕ. ತನ್ನ ವೃತ್ತಿಯುದ್ದಕ್ಕೂ ಪ್ರಾಮಾಣಿಕವಾಗಿ ಯಾವುದೇ ಕಳಂಕವಿಲ್ಲದೇ ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಯಾಣಿಕರ ಪಾಲಿಗೆ ಉತ್ತಮ ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಶಿವರಾಮ ಪೂಜಾರಿ ಅಂತವರು ಸುದೀರ್ಘ  ಸೇವೆ ಸಲ್ಲಿಸಿರುವುದು ಹೆಮ್ಮೆಯ ಸಂಗತಿ. ಅವರ ನಿವೃತ್ತ ಜೀವನ ಸುಖಮಯವಾಗಿರಲಿ  ಎಂದು ಚಾತ್ರ ಹಾರೈಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!