Sunday, September 8, 2024

ಭಾರತ ರತ್ನ : ಕಾಂಗ್ರೆಸ್ ದೇಶ ಕಟ್ಟಿದ ಸಾಧನೆಗಳನ್ನು ಪರೋಕ್ಷವಾಗಿ ಮೋದಿ ಒಪ್ಪಿಕೊಳ್ಳುತ್ತಿದ್ದಾರೆ : ಕಾಂಗ್ರೆಸ್‌

ಜನಪ್ರತಿನಿಧಿ (ಬೆಂಗಳೂರು) : ಕಾಂಗ್ರೆಸ್ ಎಪ್ಪತ್ತು ವರ್ಷ ಏನೂ ಮಾಡಿಯೇ ಇಲ್ಲ ಎಂದು ಭಾಷಣ ಬಿಗಿಯುತ್ತಲೇ ಮೋದಿಯವರು ಕಾಂಗ್ರೆಸ್ ದೇಶ ಕಟ್ಟಿದ ಸಾಧನೆಗಳನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಹೇಳಿದೆ.

ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯ ಮೂಲಕ ಕಾಂಗ್ರೆಸ್‌ ಆಡಳಿತವನ್ನು ತೆಗಳುವ ಮೋದಿ ಅಚರಿಗೆ ತಿರುಗೇಟು ನೀಡಿದ್ದು, ಪಿ. ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಕಾಂಗ್ರೆಸ್ ಆರ್ಥಿಕ ಕ್ರಾಂತಿ ನಡೆಸಿದ್ದನ್ನು ಒಪ್ಪಿಕೊಂಡಿದ್ದಾರೆ, ಸ್ವಾಮೀನಾಥನ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಕಾಂಗ್ರೆಸ್ ಅವಧಿಯಲ್ಲಿ ಹಸಿರು ಕ್ರಾಂತಿ ನಡೆದದ್ದನ್ನು ಒಪ್ಪಿಕೊಂಡಿದ್ದಾರೆ, ಮನಮೋಹನ್ ಸಿಂಗ್ ರನ್ನು ಅನಿವಾರ್ಯವಾಗಿ ಹೊಗಳುತ್ತಾ ಕಾಂಗ್ರೆಸ್ ಭಾರತದ ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ದಿದ್ದನ್ನು ಒಪ್ಪಿದ್ದಾರೆ ಎಂದು ಹೇಳಿದೆ.

ಬಿಜೆಪಿ ಹಾಗೂ ಮೋದಿ ಅದೆಷ್ಟೇ ತಿಪ್ಪರಾಲಾಗ ಹಾಕಿದರೂ ಕಾಂಗ್ರೆಸ್ ಸಾಧನೆಗಳ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ ಎಂದೂ ಹೇಳಿದೆ.

ಇನ್ನು, ಭಾರತದ ಮಾಜಿ ಪ್ರಧಾನಿಗಳಾದ ಚೌಧರಿ ಚರಣ್‌ ಸಿಂಗ್‌, ಪಿ.ವಿ ನರಸಿಂಹ ರಾವ್‌ ಹಾಗೂ ಹಸಿರು ಕ್ರಾಂತಿ ಹರಿಕಾರ ಕ್ರಾಂತಿಯ ಹರಿಕಾರ ಎಂ ಎಸ್‌ ಸ್ವಾಮಿನಾಥನ್‌ ಅವರಿಗೆ ನಿನ್ನೆ(ಶುಕ್ರವಾರ) ಮರಣೋತ್ತರವಾಗಿ ʼಭಾರತ ರತ್ನʼವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಸಂಸತ್‌ ಅಧಿವೇಶನದಲ್ಲಿ ನರೇಂದ್ರ ಮೋದಿ ನಿವೃತ್ತಿ ಹೊಂದಲಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಮಾತಿನ ಮೂಲಕ ಕೊಂಡಾಡಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!