Sunday, September 8, 2024

ಬಳ್ಕೂರು : ಚಂಡಿಕಾಯಾಗ ಸಂಪನ್ನ


ಕುಂದಾಪುರ: ಬಳ್ಕೂರು ಗ್ರಾಮದೈವ ಮಹಾಂಕಾಳಿ ಹಾಗೂ ಸಪರಿವಾರ ದೇವಸ್ಥಾನದಲ್ಲಿ ಮುಂಬೈ ಬ್ಯಾಂಕ್ ಉದ್ಯೋಗಿಯಾದ ರತ್ನಾಕರ ಪೂಜಾರಿ ಗುತ್ತೇದಾರ ಮನೆ ಕೋಡಿ ಇವರ ಹರಕೆ ಸೇವೆಯಾಗಿ ಚಂಡಿಕಾಯಾಗ ನೆರವೇರಿತು ಮುಂಜಾನೆಯ ಆರಂಭದ ಧಾರ್ಮಿಕ. ವಿಧಿವಿಧಾನಗಳು ಮಧ್ಯಾಹ್ನದ ಪೂರ್ಣಾಹುತಿಯೊಂದಿಗೆ ಮುಕ್ತಾಯವಾಯಿತು. ತದನಂತರ ಅನ್ನಸಂತರ್ಪಣೆ ನಡೆಯಿತು.

ಈ ಕಾರ್ಯದ ಪ್ರಧಾನ ಪುರೋಹಿತ್ಯವನ್ನು ಮಕ್ಕಿಮನೆ ನಾಗರಾಜ್ ಅಡಿಗ ಹಾಗೂ ಸಂಗಡಿಗರು ವಹಿಸಿದ್ದರು. ಆಡಳಿತ ಮಂಡಳಿಯ ಅಧ್ಯಕ್ಷೆಯಾದ ವೀಣಾ ಜಯಪ್ರಕಾಶ ಹೆಗ್ಡೆಯವರ ಸಹಕಾರದೊಂದಿಗೆ ಯಾಗವು ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಕ್ಷೇತ್ರ ಪಾತ್ರಿಗಳಾದ ಗುಂಡು ಪೂಜಾರಿ, ಅರ್ಚಕರಾದ ರಾಜು ಪೂಜಾರಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!