Sunday, September 8, 2024

ಹೆಬ್ರಿ: ಅಮೃತ ಭಾರತಿ ವಿದ್ಯಾಕೇಂದ್ರದಲ್ಲಿ ಕನ್ನಡ ಸಪ್ತಾಹ

ಹೆಬ್ರಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.8ರಂದು ಅಮೃತಭಾರತಿ ವಿದ್ಯಾಕೇಂದ್ರದಲ್ಲಿ ಕನ್ನಡ ಸಪ್ತಾಹವನ್ನು ಆಯೋಜಿಸಿದ್ದು ಅದರ ಸಮಾರೋಪ ಸಮಾರಂಭವು ವಿನೂತನ ಶೈಲಿಯಲ್ಲಿ ಮೂಡಿಬಂತು.

ಕಾರ್ಯಕ್ರಮದಲ್ಲಿ ಮುಖ್ಯ‌ ಅತಿಥಿಯಾಗಿ ಆಗಮಿಸಿದ ಅಮೃತಭಾರತಿ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಗುರುದಾಸ್ ಶೆಣೈ, ಪ್ರಾಂಶುಪಾಲರಾದ ಅರುಣ್ ಹೆಚ್.ವೈ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಇವರು ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ ಕರ್ನಾಟಕ ನಕ್ಷೆಯ ಸುತ್ತಲೂ ದೀಪ ಬೆಳಗಿಸಿ ಕನ್ನಡ ಡಿಂಡಿಮವನ್ನು ಮೊಳಗಿಸುವ ಮೂಲಕ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಶಾಲೆಯ ಎಲ್ಲಾಶಿಕ್ಷಕರು ದೀಪ ಬೆಳಗಿಸಿ ಸಂತಸ ಪಟ್ಟರು.

ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ವೇತ ಸ್ವಾಗತಿಸಿದರು. ಶಿಕ್ಷಕಿ ಗುಣವತಿ ವಂದಿಸಿದರು.ಸಾಂಸ್ಕೃತಿಕ ವೈಭವದ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!