Sunday, September 8, 2024

ಉಪ್ಪುಂದ: ಮೈತ್ರೇಯಿಗೆ ಹವ್ಯಕ ಸಭಾದಿಂದ ಸನ್ಮಾನ

ಉಪ್ಪುಂದ: ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೇಯಲ್ಲಿ ಕುಂದಾಪುರ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿನಿ ಮೈತ್ರೇಯಿ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 594 ಅಂಕ ಪಡೆದು ಕರ್ನಾಟಕ ರಾಜ್ಯಕ್ಕೆ ೫ನೇ ರ್‍ಯಾಂಕ್ ಗಳಿಸಿದ ಇವಳ ವಿಶೇಷ ಸಾಧನೆಯನ್ನು ಗೌರವಿಸಿ ಕುಂದಾಪುರ ತಾಲೂಕು ಹವ್ಯಕ ಸಭಾದಿಂದ ಸನ್ಮಾನಿಸಲಾಯಿತು.

ಹವ್ಯಕ ಸಭಾ ಅಧ್ಯಕ್ಷ ಮಕ್ಕಿ ದೇವಸ್ಥಾನದ ನಾಗರಾಜ ಭಟ್ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಮೈತ್ರೇಯಿ ಚಿಕ್ಕಂದಿನಿಂದಲು ಓದಿನಲ್ಲಿ ವಿಶೇಷ ಆಸಕ್ತಿ ಮತ್ತು ಸಾಧನೆ ಮಾಡಬೇಕೆಂಬ ಛಲ ಹೊಂದಿದಳು ಎಸ್.ಎಸ್.ಎಲ್.ಸಿ ಯಲ್ಲೂ ೫ನೇ ರ್‍ಯಾಂಕ್ ಗಳಿಸಿ ಪಿಯುಸಿಯಲ್ಲೂ ಅವಳ ಸಾಧನೆ ನಮ್ಮ ಸಮಾಜಕ್ಕೆ ಹೆಮ್ಮೆ ತಂದಿದೆ ಎಂದರು.

ಈ ಸಂದರ್ಭದಲ್ಲಿ ಹವ್ಯಕ ಸಭಾದ ಪ್ರಧಾನ ಕಾರ್ಯದರ್ಶಿ ಮತ್ತು ರಾಮಚಂದ್ರಾಪುರ ಮಠದ ಗುರಿಕಾರ ಯು. ಸಂದೇಶ್ ಭಟ್ ವಿದ್ಯಾರ್ಥಿಯ ತಂದೆ ಶಿಕ್ಷಕ ಮಂಜುನಾಥ ಶಿರೂರು ಮತ್ತು ತಾಯಿ ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!