Sunday, September 8, 2024

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ನೂತನ ದೇವಾಲಯ ಲೋಕಾರ್ಪಣೆ: ಮಾ.10ರಂದು ಹೊರೆ ಕಾಣಿಕೆ ಸಮರ್ಪಣೆ

ಕುಂದಾಪುರ: ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ, ಲಕ್ಷಮೋದಕ ಹೋಮ, ಶತ ಚಂಡಿಯಾಗ ಹಾಗೂ 2016 ಕಾಯಿ ಗಣಹೋಮ ಕಾರ್ಯಕ್ರಮವು ಮಾರ್ಚ 13ರಿಂದ 17ರ ತನಕ ನಡೆಯಲಿದ್ದು ತದಂಗವಾಗಿ ದಿನಾಂಕ ಮಾ.10ರಂದು ಬೆಳಿಗ್ಗೆ ತಲ್ಲೂರು ಶ್ರೀ ಕುಂತಿ ಅಮ್ಮನವರ ದೇವಸ್ಥಾನದಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊರೆ ಕಾಣಿಕೆ ಸಲ್ಲಿಸುವವರು ಮಾ.10ರಂದು ಬೆಳಿಗ್ಗೆ 9.30ರ ಒಳಗಾಗಿ ತಲ್ಲೂರು ಶ್ರೀ ಕುಂತಿ ಅಮ್ಮನವರ ದೇವಸ್ಥಾನಕ್ಕೆ ತಲುಪಿ ಅಲ್ಲಿಂದ ಮೆರವಣಿಗೆಯಲ್ಲಿ ಕೊಲ್ಲೂರು ಮಾರ್ಗವಾಗಿ ಸಾಗಿ ನಂತರ ಹಟ್ಟಿಯಂಗಂಡಿ ರಸ್ತೆಯ ಮೂಲಕ ಸಾಗಿ ದೇವಸ್ಥಾನ ತಲುಪುವುದಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಲ್ಲಿ ಹೊರೆ ಕಾಣಿಕೆಯನ್ನು ಸಲ್ಲಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!